ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕಿನ ನಗರಂಗೆರೆ, ಮೀರಾಸಾಬಿಹಳ್ಳಿ, ದೊಡ್ಡೇರಿ, ಬೊಮ್ಮಸಮುದ್ರ, ನನ್ನಿವಾಳದ ಅಜ್ಜನಗುಡಿ ಕೆರೆ, ಚಿಕ್ಕಮಧುರೆ ಸೇರಿ ಹಲವು ಕೆರೆಯಂಗಳದ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮತ್ತು ಭೂಮಿ ಒತ್ತುವರಿಯ ಬಗ್ಗೆ ಆಯಾ ಗ್ರಾಮದ ಜನರಿಂದ ದೂರು ಬಂದಿವೆ.ಹೀಗಾಗಿ ತಾಲ್ಲೂಕಿನ ವಿವಿಧ ಗ್ರಾಮದ ಕೆರೆಯಂಗಳದ ಪರಿಶೀಲನೆ ಮಾಡಲು ಮುಂದಿನ ದಿನಗಳಲ್ಲಿ ಕಂದಾಯ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳ ತಂಡ ರಚಿಸಲಾಗುವುದು’ ಎಂದರು.