‘ಶೋಭಾಯಾತ್ರೆ ಅಥವಾ ಮೆರವಣಿಗೆಗೆ ಅವಕಾಶವಿಲ್ಲ. ಗಣೇಶಮೂರ್ತಿಯನ್ನು ಸರಳವಾಗಿ ವಿಸರ್ಜನೆ ಮಾಡುವುದಾಗಿ ಸಮಿತಿ ಮಾಹಿತಿ ನೀಡಿದೆ. ನಾಲ್ಕು ಟ್ರ್ಯಾಕ್ಟರ್ಗಳಲ್ಲಿ ಮೂರ್ತಿಯನ್ನು ಚಂದ್ರವಳ್ಳಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಗಣೇಶ ಮೂರ್ತಿ, ರಾಮ ದೇವರ ವಿಗ್ರಹ, ನಾದಸ್ವರ ತಂಡ ಹಾಗೂ ಸ್ವಯಂ ಸೇವಕರು ಟ್ರ್ಯಾಕ್ಟರ್ನಲ್ಲಿ ಇರುತ್ತಾರೆ. ವಿಸರ್ಜನೆಯಲ್ಲಿ ಪಾಲ್ಗೊಳ್ಳಲು ಬರುವ ಜನರನ್ನು ಪೊಲೀಸರು ಮನೆಗೆ ಕಳುಹಿಸಲಿದ್ದಾರೆ’ ಎಂದು ಹೇಳಿದರು.