<p><strong>ಸಿರಿಗೆರೆ:</strong> ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಗ್ರಾಮೀಣರಲ್ಲಿ ಆರೋಗ್ಯ, ನೈರ್ಮಲ್ಯ ಇನ್ನಿತರ ವಿಷಯಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಂಜುನಾಥ್ ತಿಳಿಸಿದರು.</p>.<p>ಸಮೀಪದ ಕೋಗುಂಡೆ ಗ್ರಾಮದಲ್ಲಿ ಭರಮಸಾಗರದ ಸರ್ಕಾರಿ ಪದವಿ ಕಾಲೇಜು ವತಿಯಿಂದ ಆಯೋಜಿಸಿರುವ 6 ದಿನಗಳ ವಾರ್ಷಿಕ ಸೇವಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕಾಲೇಜು ಹಂತದಲ್ಲಿಯೇ ಮಕ್ಕಳಲ್ಲಿ ಸೇವಾ ಮನೋಭಾವ ಮೂಡಿಸುವ ಗುರಿ ಎನ್ಎಸ್ಎಸ್ ಹೊಂದಿದೆ. ಅದರ ತತ್ವ ಆಶಯಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಹೇಳಿದರು.</p>.<p>ವಾರ್ಷಿಕ ಸೇವಾ ಶಿಬಿರಗಳು ಕಾಲೇಜು ಹಂತದಲ್ಲಿ ಓದುತ್ತಿರುವ ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಎಸ್. ಶಶಿಕಲಾ ತಿಳಿಸಿದರು.</p>.<p>ವಿಶೇಷ ಆಹ್ವಾನಿತರಾಗಿ ಕೆ.ಜಿ.ವಿರೂಪಾಕ್ಷಪ್ಪ, ಪಿ.ಎಸ್.ರವೀಂದ್ರ, ಜಿ.ಎಚ್.ಶ್ರೀಶೈಲ, ದೇವೇಂದ್ರಪ್ಪ, ಎಚ್.ಎಂ.ಬಸವರಾಜ, ಶಿಲ್ಪಾ ಮೋಹನ್ದಾಸ್ ಪಾಲ್ಗೊಂಡಿದ್ದರು.</p>.<p>ಎನ್ಎಸ್ಎಸ್ ಘಟಕ 1ರ ಸಂಯೋಜಕ ಎಸ್. ಚಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಆರ್. ಮಮತಾ ಕಾರ್ಯಕ್ರಮ ನಿರ್ವಹಿಸಿದರು. ಘಟಕ 2ರ ಸಂಯೋಜಕ ಕೆ.ಎಸ್.ಚಂದ್ರಶೇಖರ ಸ್ವಾಗತಿಸಿದರು. ಪಿ.ಹರೀಶ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ:</strong> ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಗ್ರಾಮೀಣರಲ್ಲಿ ಆರೋಗ್ಯ, ನೈರ್ಮಲ್ಯ ಇನ್ನಿತರ ವಿಷಯಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಂ.ಮಂಜುನಾಥ್ ತಿಳಿಸಿದರು.</p>.<p>ಸಮೀಪದ ಕೋಗುಂಡೆ ಗ್ರಾಮದಲ್ಲಿ ಭರಮಸಾಗರದ ಸರ್ಕಾರಿ ಪದವಿ ಕಾಲೇಜು ವತಿಯಿಂದ ಆಯೋಜಿಸಿರುವ 6 ದಿನಗಳ ವಾರ್ಷಿಕ ಸೇವಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕಾಲೇಜು ಹಂತದಲ್ಲಿಯೇ ಮಕ್ಕಳಲ್ಲಿ ಸೇವಾ ಮನೋಭಾವ ಮೂಡಿಸುವ ಗುರಿ ಎನ್ಎಸ್ಎಸ್ ಹೊಂದಿದೆ. ಅದರ ತತ್ವ ಆಶಯಗಳನ್ನು ವಿದ್ಯಾರ್ಥಿಗಳು ಅನುಸರಿಸಬೇಕು ಎಂದು ಹೇಳಿದರು.</p>.<p>ವಾರ್ಷಿಕ ಸೇವಾ ಶಿಬಿರಗಳು ಕಾಲೇಜು ಹಂತದಲ್ಲಿ ಓದುತ್ತಿರುವ ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಎಸ್. ಶಶಿಕಲಾ ತಿಳಿಸಿದರು.</p>.<p>ವಿಶೇಷ ಆಹ್ವಾನಿತರಾಗಿ ಕೆ.ಜಿ.ವಿರೂಪಾಕ್ಷಪ್ಪ, ಪಿ.ಎಸ್.ರವೀಂದ್ರ, ಜಿ.ಎಚ್.ಶ್ರೀಶೈಲ, ದೇವೇಂದ್ರಪ್ಪ, ಎಚ್.ಎಂ.ಬಸವರಾಜ, ಶಿಲ್ಪಾ ಮೋಹನ್ದಾಸ್ ಪಾಲ್ಗೊಂಡಿದ್ದರು.</p>.<p>ಎನ್ಎಸ್ಎಸ್ ಘಟಕ 1ರ ಸಂಯೋಜಕ ಎಸ್. ಚಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಆರ್. ಮಮತಾ ಕಾರ್ಯಕ್ರಮ ನಿರ್ವಹಿಸಿದರು. ಘಟಕ 2ರ ಸಂಯೋಜಕ ಕೆ.ಎಸ್.ಚಂದ್ರಶೇಖರ ಸ್ವಾಗತಿಸಿದರು. ಪಿ.ಹರೀಶ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>