<p><strong>ಹಿರಿಯೂರು:</strong> ನಗರದಲ್ಲಿರುವ ತೇರುಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಎಂದರೆ ಅಲ್ಲಿ ಭಕ್ತಿರಸಕ್ಕೆ ಮಾತ್ರವಲ್ಲದೆ, ಮನರಂಜನೆಗೆ ಕೊರತೆಯೇ ಇರುವುದಿಲ್ಲ. ಕರ್ಪೂರದಾರತಿ ಬೆಳಗುವ ಮೈನವಿರೇಳಿಸುವ ಕಾರ್ಯಕ್ರಮ ಒಂದೆಡೆಯಾದರೆ, ಕ್ರೀಡೆಗೂ ಆದ್ಯತೆ ಇರುತ್ತದೆ.</p>.<p>ಇಲ್ಲಿ ನಡೆಯುವ ವಾರ್ಷಿಕ ಕುಸ್ತಿ ಪಂದ್ಯಾವಳಿಗಾಗಿ ಪೈಲ್ವಾನರು ಕಾದು ಕುಳಿತಿರುತ್ತಾರಲ್ಲದೆ, ಭಾರಿ ಆಸಕ್ತಿಯಿಂದ ಪಾಲ್ಗೊಂಡು ಕುಸ್ತಿ ಪ್ರತಿಯರನ್ನು ರಂಜಿಸುತ್ತಾರೆ.</p>.<p>ಜಾತ್ರೆಯ ಅಂಗವಾಗಿ ಮದಕರಿ ಯುವಕ ಸಂಘದ ನೇತೃತ್ವದಲ್ಲಿ ನಡೆಯುವ ಜಂಗೀ ಕುಸ್ತಿ ಪಂದ್ಯಾವಳಿಯು ಈ ಬಾರಿ ಫೆ. 4ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ತಿಳಿಸಿದ್ದಾರೆ.</p>.<p>ಪಾಳೆಯಗಾರರ ವಂಶಸ್ಥ ರಾಜಾಕೆಂಚಪ್ಪ ನಾಯಕ 1446ರಲ್ಲಿ ತೇರುಮಲ್ಲೇಶ್ವರ ಸ್ವಾಮಿ ದೇಗುಲ ನಿರ್ಮಿಸಿದ್ದು, ಪಾಳೇಗಾರರ ಆಳ್ವಿಕೆ ಕಾಲದಲ್ಲಿ ಈ ಭಾಗದಲ್ಲಿ ಕುಸ್ತಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಚಿತ್ರದುರ್ಗದಲ್ಲಿ ಈಗಲೂ ಗರಡಿ ಮನೆಗಳನ್ನು ಕಾಣಬಹುದಾಗಿದೆ. ಪಾಳೆಯಗಾರರ ದೊರೆ ಮದಕರಿ ನಾಯಕ ಖ್ಯಾತ ಕುಸ್ತಿಪಟುವಾಗಿದ್ದ ಎಂಬ ಮಾತುಗಳಿವೆ.</p>.<p>ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಕುಸ್ತಿ ಆಟಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಕಾರಣದಿಂದ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ ನಡೆದ ಮಾರನೇ ದಿನ ಹಿರಿಯೂರಿನಲ್ಲಿ ಕುಸ್ತಿ ಆಯೋಜಿಸುತ್ತ ಬರಲಾಗಿದೆ ಎಂದು ಅವರು ಹೇಳಿದ್ದಾರೆ.</p>.<p>ಜಂಗೀ ಕುಸ್ತಿ ಪಂದ್ಯಾವಳಿಗೆ ದಾವಣಗೆರೆ<strong>, </strong>ಹಾವೇರಿ<strong>, </strong>ಹುಬ್ಬಳ್ಳಿ<strong>, </strong>ಚಿತ್ರದುರ್ಗ<strong>, </strong>ಶಿವಮೊಗ್ಗ<strong>, </strong>ತುಮಕೂರು<strong>, </strong>ಕಲಬುರಗಿ ಭಾಗಗಳಿಂದಲೂ ಕುಸ್ತಿಪಟುಗಳು ಬರುತ್ತಾರೆ. ಬ್ರಹ್ಮರಥೋತ್ಸವ<strong>, </strong>ಕರ್ಪೂರದಾರತಿಷ್ಟೇ ಜಾತ್ರೆಯ ಬಹುದೊಡ್ಡ ಆಕರ್ಷಣೆಯಾಗಿ ಜಂಗೀ ಕುಸ್ತಿ ಪಂದ್ಯಾವಳಿ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರಿಯೂರು:</strong> ನಗರದಲ್ಲಿರುವ ತೇರುಮಲ್ಲೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಎಂದರೆ ಅಲ್ಲಿ ಭಕ್ತಿರಸಕ್ಕೆ ಮಾತ್ರವಲ್ಲದೆ, ಮನರಂಜನೆಗೆ ಕೊರತೆಯೇ ಇರುವುದಿಲ್ಲ. ಕರ್ಪೂರದಾರತಿ ಬೆಳಗುವ ಮೈನವಿರೇಳಿಸುವ ಕಾರ್ಯಕ್ರಮ ಒಂದೆಡೆಯಾದರೆ, ಕ್ರೀಡೆಗೂ ಆದ್ಯತೆ ಇರುತ್ತದೆ.</p>.<p>ಇಲ್ಲಿ ನಡೆಯುವ ವಾರ್ಷಿಕ ಕುಸ್ತಿ ಪಂದ್ಯಾವಳಿಗಾಗಿ ಪೈಲ್ವಾನರು ಕಾದು ಕುಳಿತಿರುತ್ತಾರಲ್ಲದೆ, ಭಾರಿ ಆಸಕ್ತಿಯಿಂದ ಪಾಲ್ಗೊಂಡು ಕುಸ್ತಿ ಪ್ರತಿಯರನ್ನು ರಂಜಿಸುತ್ತಾರೆ.</p>.<p>ಜಾತ್ರೆಯ ಅಂಗವಾಗಿ ಮದಕರಿ ಯುವಕ ಸಂಘದ ನೇತೃತ್ವದಲ್ಲಿ ನಡೆಯುವ ಜಂಗೀ ಕುಸ್ತಿ ಪಂದ್ಯಾವಳಿಯು ಈ ಬಾರಿ ಫೆ. 4ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ತಿಳಿಸಿದ್ದಾರೆ.</p>.<p>ಪಾಳೆಯಗಾರರ ವಂಶಸ್ಥ ರಾಜಾಕೆಂಚಪ್ಪ ನಾಯಕ 1446ರಲ್ಲಿ ತೇರುಮಲ್ಲೇಶ್ವರ ಸ್ವಾಮಿ ದೇಗುಲ ನಿರ್ಮಿಸಿದ್ದು, ಪಾಳೇಗಾರರ ಆಳ್ವಿಕೆ ಕಾಲದಲ್ಲಿ ಈ ಭಾಗದಲ್ಲಿ ಕುಸ್ತಿ ಅತ್ಯಂತ ಜನಪ್ರಿಯತೆ ಪಡೆದಿತ್ತು. ಚಿತ್ರದುರ್ಗದಲ್ಲಿ ಈಗಲೂ ಗರಡಿ ಮನೆಗಳನ್ನು ಕಾಣಬಹುದಾಗಿದೆ. ಪಾಳೆಯಗಾರರ ದೊರೆ ಮದಕರಿ ನಾಯಕ ಖ್ಯಾತ ಕುಸ್ತಿಪಟುವಾಗಿದ್ದ ಎಂಬ ಮಾತುಗಳಿವೆ.</p>.<p>ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ಕುಸ್ತಿ ಆಟಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಕಾರಣದಿಂದ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವ ನಡೆದ ಮಾರನೇ ದಿನ ಹಿರಿಯೂರಿನಲ್ಲಿ ಕುಸ್ತಿ ಆಯೋಜಿಸುತ್ತ ಬರಲಾಗಿದೆ ಎಂದು ಅವರು ಹೇಳಿದ್ದಾರೆ.</p>.<p>ಜಂಗೀ ಕುಸ್ತಿ ಪಂದ್ಯಾವಳಿಗೆ ದಾವಣಗೆರೆ<strong>, </strong>ಹಾವೇರಿ<strong>, </strong>ಹುಬ್ಬಳ್ಳಿ<strong>, </strong>ಚಿತ್ರದುರ್ಗ<strong>, </strong>ಶಿವಮೊಗ್ಗ<strong>, </strong>ತುಮಕೂರು<strong>, </strong>ಕಲಬುರಗಿ ಭಾಗಗಳಿಂದಲೂ ಕುಸ್ತಿಪಟುಗಳು ಬರುತ್ತಾರೆ. ಬ್ರಹ್ಮರಥೋತ್ಸವ<strong>, </strong>ಕರ್ಪೂರದಾರತಿಷ್ಟೇ ಜಾತ್ರೆಯ ಬಹುದೊಡ್ಡ ಆಕರ್ಷಣೆಯಾಗಿ ಜಂಗೀ ಕುಸ್ತಿ ಪಂದ್ಯಾವಳಿ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>