<p><strong>ಚಿತ್ರದುರ್ಗ: ‘</strong>ದೇಶ ಹಾಗೂ ಮನುಕುಲಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನ ಅತ್ಯಂತ ಶ್ರೇಷ್ಠ ಗ್ರಂಥವಾಗಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಯಂಗಪ್ಪನ ಕಟ್ಟೆಯ ರುದ್ರಭೂಮಿಯಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಡಾ.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಮೌಢ್ಯ ವಿರೋಧಿ ಪರಿವರ್ತನಾ ದಿನ’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.</p>.<p>‘ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಹೀಗೆ ದೇಶದೊಳಗೆ ಅನೇಕ ಧರ್ಮಗಳಿವೆ. ಇದರೊಳಗೆ ಅನೇಕ ಸಮುದಾಯಗಳು ಇವೆ. ಸರ್ವರಿಗೂ ಒಳಿತನ್ನು ಬಯಸುವ ಪ್ರತ್ಯೇಕವಾದ ಧರ್ಮ ಗ್ರಂಥಗಳಿವೆ. ಇವುಗಳನ್ನು ಶ್ರದ್ಧಾ, ಭಕ್ತಿಯಿಂದ ಪಾಲಿಸುವವರೂ ನಮ್ಮ ನಡುವೆ ಇದ್ದಾರೆ. ಆದರೆ, ಎಲ್ಲರಿಗೂ ಸಮಾನ<br />ವಾದ ಗ್ರಂಥವನ್ನು ನೀಡಿದ ಕೀರ್ತಿ ಬಾಬಾ<br />ಸಾಹೇಬರಿಗೆ ಸಲ್ಲುತ್ತದೆ’ ಎಂದರು.</p>.<p>‘ಯಾವ ಗ್ರಂಥವೂ ಮೌಢ್ಯಕ್ಕೆ ಉತ್ತೇಜನ ನೀಡಿಲ್ಲ. ಆದರೆ, ಆಚರಣೆ ನೆಪದಲ್ಲಿ ಕೆಲವರು ಮೌಢ್ಯ ಬಿತ್ತುವ ಕೆಲಸ ಸಮಾಜದಲ್ಲಿ ಮಾಡಿದ್ದಾರೆ. ಹಾಗೆಯೇ ಈಗಲೂ ಮಾಡುತ್ತಲೂ ಇದ್ದಾರೆ. ಸ್ವಾರ್ಥಕ್ಕೆ ಬಳಸಿಕೊಂಡವರು ಇದ್ದಾರೆ. ಮನುಷ್ಯ ಎಂದಿಗೂ ಮೌಢ್ಯಕ್ಕೆ ಒಳಗಾಗಬಾರದು. ವೈಚಾರಿಕ ಪ್ರಜ್ಞೆ ಅಳವಡಿಸಿಕೊಂಡು ಸರಿ-ತಪ್ಪನ್ನು ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್ಪೀರ್, ಮಾಜಿ ಅಧ್ಯಕ್ಷ ಪಾತ್ಯರಾಜನ್, ಮುಖಂಡರಾದ ಬಿ.ಟಿ. ಜಗದೀಶ್, ಅಂಜಿನಪ್ಪ, ಮರುಳಾರಾಧ್ಯ, ಟಿಪ್ಪು ಖಾಸಿಂ ಆಲಿ, ಮುನಿಯಪ್ಪ, ಪಾಪಯ್ಯ ಇದ್ದರು.</p>.<p class="Subhead"><strong>ಸ್ಮಶಾನ ಕೆಟ್ಟದಲ್ಲ: ಶರಣರು</strong></p>.<p>‘ಸ್ಮಶಾನದ ಬಗ್ಗೆಯೂ ಕೆಲವರಲ್ಲಿ ಮೌಢ್ಯವಿದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಹಿಂದೆ ಮುರುಘಾಮಠದಿಂದ ವಿವಾಹ ಕೂಡ ಮಾಡಿಸಿದ್ದೇವೆ. ಅದು ಕೂಡ ಪವಿತ್ರವಾದ ಸ್ಥಳ’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.</p>.<p>‘ಮನುಷ್ಯ ಮೃತಪಟ್ಟು ಅಂತಿಮಯಾತ್ರೆ ಬಳಿಕ ಸಿಗುವ ಶಾಶ್ವತ ನೆಲೆಯೇ ಸ್ಮಶಾನ. ಇದು ಖಂಡಿತ ಕೆಟ್ಟದಾದ ಸ್ಥಳವಲ್ಲ. ಯಾರೂ ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡಬೇಡಿ. ಇಲ್ಲಿ ಪ್ರೇತಾತ್ಮ ಇರುತ್ತವೆ ಎಂಬ ಭಯ, ಅಂಜಿಕೆ, ಭ್ರಮೆ, ಮೌಢ್ಯದಿಂದ ಮೊದಲು ಹೊರಬನ್ನಿ’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ: ‘</strong>ದೇಶ ಹಾಗೂ ಮನುಕುಲಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನ ಅತ್ಯಂತ ಶ್ರೇಷ್ಠ ಗ್ರಂಥವಾಗಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಯಂಗಪ್ಪನ ಕಟ್ಟೆಯ ರುದ್ರಭೂಮಿಯಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯಿಂದ ಡಾ.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ‘ಮೌಢ್ಯ ವಿರೋಧಿ ಪರಿವರ್ತನಾ ದಿನ’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.</p>.<p>‘ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಹೀಗೆ ದೇಶದೊಳಗೆ ಅನೇಕ ಧರ್ಮಗಳಿವೆ. ಇದರೊಳಗೆ ಅನೇಕ ಸಮುದಾಯಗಳು ಇವೆ. ಸರ್ವರಿಗೂ ಒಳಿತನ್ನು ಬಯಸುವ ಪ್ರತ್ಯೇಕವಾದ ಧರ್ಮ ಗ್ರಂಥಗಳಿವೆ. ಇವುಗಳನ್ನು ಶ್ರದ್ಧಾ, ಭಕ್ತಿಯಿಂದ ಪಾಲಿಸುವವರೂ ನಮ್ಮ ನಡುವೆ ಇದ್ದಾರೆ. ಆದರೆ, ಎಲ್ಲರಿಗೂ ಸಮಾನ<br />ವಾದ ಗ್ರಂಥವನ್ನು ನೀಡಿದ ಕೀರ್ತಿ ಬಾಬಾ<br />ಸಾಹೇಬರಿಗೆ ಸಲ್ಲುತ್ತದೆ’ ಎಂದರು.</p>.<p>‘ಯಾವ ಗ್ರಂಥವೂ ಮೌಢ್ಯಕ್ಕೆ ಉತ್ತೇಜನ ನೀಡಿಲ್ಲ. ಆದರೆ, ಆಚರಣೆ ನೆಪದಲ್ಲಿ ಕೆಲವರು ಮೌಢ್ಯ ಬಿತ್ತುವ ಕೆಲಸ ಸಮಾಜದಲ್ಲಿ ಮಾಡಿದ್ದಾರೆ. ಹಾಗೆಯೇ ಈಗಲೂ ಮಾಡುತ್ತಲೂ ಇದ್ದಾರೆ. ಸ್ವಾರ್ಥಕ್ಕೆ ಬಳಸಿಕೊಂಡವರು ಇದ್ದಾರೆ. ಮನುಷ್ಯ ಎಂದಿಗೂ ಮೌಢ್ಯಕ್ಕೆ ಒಳಗಾಗಬಾರದು. ವೈಚಾರಿಕ ಪ್ರಜ್ಞೆ ಅಳವಡಿಸಿಕೊಂಡು ಸರಿ-ತಪ್ಪನ್ನು ಯೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್ಪೀರ್, ಮಾಜಿ ಅಧ್ಯಕ್ಷ ಪಾತ್ಯರಾಜನ್, ಮುಖಂಡರಾದ ಬಿ.ಟಿ. ಜಗದೀಶ್, ಅಂಜಿನಪ್ಪ, ಮರುಳಾರಾಧ್ಯ, ಟಿಪ್ಪು ಖಾಸಿಂ ಆಲಿ, ಮುನಿಯಪ್ಪ, ಪಾಪಯ್ಯ ಇದ್ದರು.</p>.<p class="Subhead"><strong>ಸ್ಮಶಾನ ಕೆಟ್ಟದಲ್ಲ: ಶರಣರು</strong></p>.<p>‘ಸ್ಮಶಾನದ ಬಗ್ಗೆಯೂ ಕೆಲವರಲ್ಲಿ ಮೌಢ್ಯವಿದೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಹಿಂದೆ ಮುರುಘಾಮಠದಿಂದ ವಿವಾಹ ಕೂಡ ಮಾಡಿಸಿದ್ದೇವೆ. ಅದು ಕೂಡ ಪವಿತ್ರವಾದ ಸ್ಥಳ’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.</p>.<p>‘ಮನುಷ್ಯ ಮೃತಪಟ್ಟು ಅಂತಿಮಯಾತ್ರೆ ಬಳಿಕ ಸಿಗುವ ಶಾಶ್ವತ ನೆಲೆಯೇ ಸ್ಮಶಾನ. ಇದು ಖಂಡಿತ ಕೆಟ್ಟದಾದ ಸ್ಥಳವಲ್ಲ. ಯಾರೂ ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡಬೇಡಿ. ಇಲ್ಲಿ ಪ್ರೇತಾತ್ಮ ಇರುತ್ತವೆ ಎಂಬ ಭಯ, ಅಂಜಿಕೆ, ಭ್ರಮೆ, ಮೌಢ್ಯದಿಂದ ಮೊದಲು ಹೊರಬನ್ನಿ’ ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>