‘ಹೊಸದುರ್ಗಕ್ಕೆ ಹೋಗುವ ಬಸ್ಗಳು ವಾಣಿವಿಲಾಸಪುರಕ್ಕೆ ಬಂದು, ಮರಳಿ ಕಕ್ಕಯ್ಯನಹಟ್ಟಿ ಮೂಲಕ ಭರಮಗಿರಿ–ಬಳಗಟ್ಟ ರಸ್ತೆಗೆ ಹೋಗಿ ಅಲ್ಲಿಂದ ಲಕ್ಕಿಹಳ್ಳಿ ಕಡೆ ಸಾಗಬೇಕಿದೆ. ಕೋಡಿಯಲ್ಲಿ ನೀರು ಹರಿಯುತ್ತಿರುವ ಕಾರಣ ಬಸ್ಗಳು ಎಂಟ್ಟತ್ತು ಕಿ.ಮೀ. ಸುತ್ತಿಕೊಂಡು ಸಾಗಬೇಕಿದೆ. ಇದರಿಂದ ಸಮಯ ಮತ್ತು ಇಂಧನ ಎರಡೂ ವ್ಯರ್ಥವಾಗುತ್ತಿದೆ. ಜೊತೆಗೆ ಬೆಂಗಳೂರಿನಿಂದ ತರೀಕೆರೆ, ಭದ್ರಾವತಿ, ಶಿವಮೊಗ್ಗದ ಕಡೆ ಹೋಗುವವರು ವಾಣಿವಿಲಾಸ ಜಲಾಶಯ ವೀಕ್ಷಣೆ ಮಾಡಿ ಅದೇ ರಸ್ತೆಯಲ್ಲಿ ಹೊಸದುರ್ಗದ ಕಡೆ ಹೋಗಬಹುದಿತ್ತು. ಆದರೆ, ಕೋಡಿಯ ನೀರು ರಸ್ತೆಯನ್ನು ಕೊರೆದಿರುವ ಕಾರಣ ಏಳೆಂಟು ಕಿ.ಮೀ. ಸುತ್ತಬೇಕು ಎಂದು ಜಲಾಶಯ ವೀಕ್ಷಿಸದೆ ಹೋಗುತ್ತಿದ್ದಾರೆ’ ಎಂದು ಜಬೀವುಲ್ಲಾ ಹೇಳಿದ್ದಾರೆ.