ದೇಗುಲಕ್ಕೆ ಮರಳಿದ ನಂತರ ಸರಸ್ವತಿ ನಾಗರಾಜ್ ಮತ್ತು ಎಚ್.ಎಸ್. ನಾಗರಾಜಗುಪ್ತ ಅವರ ನೇತೃತ್ವದಲ್ಲಿ 50 ಪುಟ್ಟ ಕನ್ನಿಕೆಯರಿಗೆ ಪೂಜೆ ನೆರವೇರಿಸಲಾಯಿತು. ನಂತರ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ, ವಾಸವಿ ಮೂಲಮಂತ್ರ, ಯಜ್ಞಹೋಮ, ಪೂರ್ಣಾಹುತಿ, ಮಹಾನೈವೇದ್ಯ, ಮಂತ್ರಪುಷ್ಪ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸಂಜೆ ವಾಸವೀದೇವಿ ಭಜನಾ ಕಾರ್ಯಕ್ರಮ, ದಿವ್ಯದೀಪ ಜ್ಯೋತಿದರ್ಶನ, ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.