ಈ ಬಾರಿಯೂ ಬರಗಾಲದ ಭೀತಿ ಎದುರಿಸುತ್ತಿದ್ದ ತಾಲ್ಲೂಕಿನ ಜನರಿಗೆ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ, ವೇದಾವತಿ ನದಿ ಪಾತ್ರದ ಕೊರಟಿಕೆರೆ, ಕಂಗುವಳ್ಳಿ, ಬಲ್ಲಾಳಸಮುದ್ರ, ಕರ್ಲಮಾವಿನಹಳ್ಳಿ ಬಳಿಯ ಚೆಕ್ ಡ್ಯಾಂ, ಬ್ಯಾರೇಜ್ ಕಂ ಬ್ರಿಡ್ಜ್ ಭರ್ತಿಯಾಗಿ ಹರಿಯುತ್ತಿರುವುದು ಹರ್ಷವನ್ನುಂಟು ಮಾಡಿದೆ. ಪಟ್ಟಣದ ಜನರಿಗೆ ಕಳೆದ ಒಂದು ವರ್ಷದಿಂದ ತಲೆನೋವಾಗಿ ಪರಿಣಮಿಸಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೆಲ್ಲೋಡಿನ ಬ್ಯಾರೇಜ್ ಭರ್ತಿಯಾಗಿರುವುದು ಸಹಕಾರಿಯಾಗಿದೆ.