ಬರವಣಿಗೆ ಎಂಬುದು ಸೃಜನಶೀಲತೆ. ಭಾವನೆ, ಅಂತರಂಗದ ಅಭಿವ್ಯಕ್ತಿಯನ್ನು ಹಾಳೆಯ ಮೇಲೆ ಮೂಡಿಸುವುದು ಕಷ್ಟದ ಕೆಲಸ. ಕಥೆ, ಕಾದಂಬರಿ, ಕವನ ರಚಿಸುವುದು ಸುಲಭದ ಮಾತಲ್ಲ. ಜನರ ನಾಡಿಮಿಡಿತ ಅರಿಯಬಲ್ಲವರು ಮಾತ್ರ ಸಾಹಿತಿ ಆಗಬಲ್ಲರು. ಯಾವ ಕೃತಿಯನ್ನೇ ರಚಿಸಲಿ ಸಮಾಜದ ವ್ಯವಸ್ಥೆ ತಿದ್ದುವ, ನಿರ್ಗತಿಕರ ನೋವಿಗೆ ಸ್ಪಂದಿಸುವ ಹಾಗೂ ಶೋಷಿತರ ದನಿಯಾಗಿ ನಿಲ್ಲುವ ಸಂಕಲ್ಪ ಕೃತಿಕಾರರಲ್ಲಿ ಇರಬೇಕು ಎಂದು ಸಲಹೆ ನೀಡಿದರು.