ನವೆಂಬರ್ 25ರಂದು ಬೆಳಿಗಿನ ಜಾವ ದೇವಸ್ಥಾನಕ್ಕೆ ನುಗ್ಗಿದ್ದ ಆರೋಪಿಗಳು ಹುಂಡಿ ಹೊಡೆದು ಸುಮಾರು ₨ 50 ಸಾವಿರ ನಗದು ದೋಚಿದ್ದರು. ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಉಮೇಶ ಈಶ್ವರ ನಾಯ್ಕ, ಸಿಪಿಐಲೋಕೇಶ್, ಪಿಎಸ್ಐ ಮಂಜು ಕುಪ್ಪಲೂರುನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಶುಕ್ರವಾರ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.