<p><strong>ಮಂಗಳೂರು: </strong>ಶಿಕ್ಷಣ ಕ್ಷೇತ್ರದಲ್ಲೂ ಸಮಾನತೆ ತರಬೇಕು ಎನ್ನುವ ನಿಟ್ಟಿನಲ್ಲಿ ನೀಟ್ ಜಾರಿಗೆ ಬಂದಿರುವುದು ಎಬಿವಿಪಿಯ ಪ್ರಯತ್ನದ ಫಲವಾಗಿದೆ ಎಂದು ಎಬಿವಿಪಿ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್ ಅಂಬೇಕರ್ ಹೇಳಿದರು.</p>.<p>ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿರುವ ಎಬಿವಿಪಿ 39 ನೇ ರಾಜ್ಯ ಸಮ್ಮೇಳನದಲ್ಲಿ ಶನಿವಾರ ‘ವರ್ತಮಾನ ಭಾರತ’ ವಿಷಯದ ಕುರಿತು ಅವರು ಮಾತನಾಡಿದರು.</p>.<p>ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಆಶಾದಾಯಕ ಬೆಳವಣಿಗೆಯಾಗಿದೆ. ದೇಶದಲ್ಲಿ ಸಕಾರಾತ್ಮಕವಾದ ಬದಲಾವಣೆಗೆ ಕಾರಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಎಬಿವಿಪಿ ಸ್ವಾಗತಿಸುತ್ತದೆ ಎಂದರು.</p>.<p>‘ಸಂವಿಧಾನದಲ್ಲಿ ಜಾತ್ಯತೀತತೆಯ ಪರಿಭಾಷೆಯನ್ನು ತಪ್ಪುದಾರಿಗೆ ಎಳೆಯುವ ಮೂಲಕ ರಾಜಕೀಯ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ನವರು ಕಾರ್ಪೆಟ್ ಕೆಳಗೆ ಕಸವನ್ನು ಮಾತ್ರ ತುಂಬಿದ್ದರು. ಈಗ ನಾವು ಕಾರ್ಪೆಟ್ ಅನ್ನು ಶುದ್ಧೀಕರಿಸುತ್ತಿದ್ದೇವೆ. ನಮ್ಮ ಆಂಟಿ-ವೈರಸ್, ಅವರ ವೈರಸ್ ವಿರುದ್ಧ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.</p>.<p>ಟಿಪ್ಪು ಸುಲ್ತಾನ್ ಬಗ್ಗೆ ಇತಿಹಾಸದ ಪುಟಗಳಲ್ಲಿ ಸುಳ್ಳು ಸಂಗತಿಗಳಿವೆ. ಇತಿಹಾಸವನ್ನು ಮರೆತವರಿಗೆ ಇತಿಹಾಸವನ್ನು ಕಲಿಸುವ ಅವಶ್ಯಕತೆಯಿದೆ. ಸಾವರ್ಕರ್ ಅವರ ದೇಶಭಕ್ತಿಯ ಉತ್ಸಾಹದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.</p>.<p>ಎಬಿವಿಪಿ ಮಹಿಳಾ ಸುರಕ್ಷತೆ ಮತ್ತು ಸಶಕ್ತತೆಯ ದೃಷ್ಟಿಯಿಂದ ದೇಶದಾದ್ಯಂತ 20 ವರ್ಷದೊಳಗಿನ ಸುಮಾರು 8 ಲಕ್ಷ ಜನರಿಗೆ ತರಬೇತಿ ನೀಡಿದೆ. ಮುಂದಿನ ದಿನಗಳಲ್ಲಿ 20 ವರ್ಷದೊಳಗಿನ ಎಲ್ಲ ಯುವತಿಯರಿಗೂ ಮಹಿಳಾ ಸಶಕ್ತತೆಯ ತರಬೇತಿ ನೀಡುವ ಗುರಿ ಇದೆ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ದೇಶದ ಹಿತಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಲು ಯುವಕರು ಮುಂದೆ ಬರಬೇಕಾಗಿದೆ ಎಂದರು.</p>.<p>ನಮ್ಮ ಧರ್ಮ, ನಂಬಿಕೆಗಳೊಂದಿಗೆ ನಾವು ಇತರರಿಗೆ ತೊಂದರೆ ಉಂಟು ಮಾಡದೇ, ಬದುಕುವುದರ ಜತೆಗೆ ದೇಶ ಪ್ರೇಮವನ್ನು ತೋರಿಸಬೇಕಾಗಿದೆ. ದೇಶದ ಒಳಿತಿಗಾಗಿ ನಾವು ಸಮರ್ಪಣಾ ಭಾವದಿಂದ ಪ್ರಾಣತ್ಯಾಗಕ್ಕೂ ಸಿದ್ಧರಾಗುವ ಆದರ್ಶ ನಮ್ಮ ಮುಂದಿರಬೇಕಾಗಿದೆ ಎಂದು ತಿಳಿಸಿದರು.</p>.<p>ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ವೀರೇಶ್ ಬಾಳೆಕಾಯಿ, ಕಾರ್ಯದರ್ಶಿ ಪ್ರತೀಕ್ ಮಾಳಿ, ಬೆಂಗಳೂರು ನಗರ ಘಟಕದ ಕಾರ್ಯದರ್ಶಿ ಸೂರಜ್ ಪಂಡಿತ್ ವೇದಿಕೆಯಲ್ಲಿದ್ದರು. ಸತೀಶ್ ನಿರೂಪಿಸಿದರು.</p>.<p>‘ಎಬಿವಿಪಿ ಆಂಟಿ ವೈರಸ್’</p>.<p>ದೇಶದಲ್ಲಿ ಭಯೋತ್ಪಾದನೆ, ಮಾವೋವಾದಿಗಳು, ನಕ್ಸಲರು ಮತ್ತು ನಗರ ನಕ್ಸಲ್ಗಳಿಗೆ ಎಬಿವಿಪಿಯು ಆಂಟಿ-ವೈರಸ್ ಮತ್ತು ಚುಚ್ಚುಮದ್ದಾಗಿದೆ ಎಂದು ಸುನೀಲ್ ಅಂಬೇಕರ್ ಹೇಳಿದರು.</p>.<p>ದೇಶದಲ್ಲಿ 950 ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಕೇವಲ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಎತ್ತಿದ ಧ್ವನಿಯು ಇಡೀ ವಿದ್ಯಾರ್ಥಿ ಸಮುದಾಯದ ಧ್ವನಿಯಾಗಲು ಸಾಧ್ಯವಿಲ್ಲ. ಎಬಿವಿಪಿ ವಿದ್ಯಾರ್ಥಿಗಳ ನಿಜವಾದ ಪ್ರತಿನಿಧಿಯಾಗಿದ್ದು, ದೇಶದಾದ್ಯಂತ ತನ್ನ ಅಸ್ತಿತ್ವವನ್ನು ಹೊಂದಿದೆ ಎಂದು ತಿಳಿಸಿದರು.</p>.<p>ದೇಶದ ಕೆಲವು ವಿಶ್ವವಿದ್ಯಾಲಯ ಕ್ಯಾಂಪಸ್ಗಳಿಂದ ಮಾವೋವಾದಿ ಸಹಾನುಭೂತಿ ಸಂದೇಶ ಕಳುಹಿಸಲಾಗುತ್ತಿದೆ. ಇಂತಹ ಚಟುವಟಿಕೆಗಳನ್ನು ಎಬಿವಿಪಿ ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಿದೆ. ಎಬಿವಿಪಿ ಮತ್ತೊಮ್ಮೆ ದೇಶದ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ತೆಗೆದುಕೊಂಡಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಶಿಕ್ಷಣ ಕ್ಷೇತ್ರದಲ್ಲೂ ಸಮಾನತೆ ತರಬೇಕು ಎನ್ನುವ ನಿಟ್ಟಿನಲ್ಲಿ ನೀಟ್ ಜಾರಿಗೆ ಬಂದಿರುವುದು ಎಬಿವಿಪಿಯ ಪ್ರಯತ್ನದ ಫಲವಾಗಿದೆ ಎಂದು ಎಬಿವಿಪಿ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್ ಅಂಬೇಕರ್ ಹೇಳಿದರು.</p>.<p>ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿರುವ ಎಬಿವಿಪಿ 39 ನೇ ರಾಜ್ಯ ಸಮ್ಮೇಳನದಲ್ಲಿ ಶನಿವಾರ ‘ವರ್ತಮಾನ ಭಾರತ’ ವಿಷಯದ ಕುರಿತು ಅವರು ಮಾತನಾಡಿದರು.</p>.<p>ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಆಶಾದಾಯಕ ಬೆಳವಣಿಗೆಯಾಗಿದೆ. ದೇಶದಲ್ಲಿ ಸಕಾರಾತ್ಮಕವಾದ ಬದಲಾವಣೆಗೆ ಕಾರಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಎಬಿವಿಪಿ ಸ್ವಾಗತಿಸುತ್ತದೆ ಎಂದರು.</p>.<p>‘ಸಂವಿಧಾನದಲ್ಲಿ ಜಾತ್ಯತೀತತೆಯ ಪರಿಭಾಷೆಯನ್ನು ತಪ್ಪುದಾರಿಗೆ ಎಳೆಯುವ ಮೂಲಕ ರಾಜಕೀಯ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ನವರು ಕಾರ್ಪೆಟ್ ಕೆಳಗೆ ಕಸವನ್ನು ಮಾತ್ರ ತುಂಬಿದ್ದರು. ಈಗ ನಾವು ಕಾರ್ಪೆಟ್ ಅನ್ನು ಶುದ್ಧೀಕರಿಸುತ್ತಿದ್ದೇವೆ. ನಮ್ಮ ಆಂಟಿ-ವೈರಸ್, ಅವರ ವೈರಸ್ ವಿರುದ್ಧ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.</p>.<p>ಟಿಪ್ಪು ಸುಲ್ತಾನ್ ಬಗ್ಗೆ ಇತಿಹಾಸದ ಪುಟಗಳಲ್ಲಿ ಸುಳ್ಳು ಸಂಗತಿಗಳಿವೆ. ಇತಿಹಾಸವನ್ನು ಮರೆತವರಿಗೆ ಇತಿಹಾಸವನ್ನು ಕಲಿಸುವ ಅವಶ್ಯಕತೆಯಿದೆ. ಸಾವರ್ಕರ್ ಅವರ ದೇಶಭಕ್ತಿಯ ಉತ್ಸಾಹದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.</p>.<p>ಎಬಿವಿಪಿ ಮಹಿಳಾ ಸುರಕ್ಷತೆ ಮತ್ತು ಸಶಕ್ತತೆಯ ದೃಷ್ಟಿಯಿಂದ ದೇಶದಾದ್ಯಂತ 20 ವರ್ಷದೊಳಗಿನ ಸುಮಾರು 8 ಲಕ್ಷ ಜನರಿಗೆ ತರಬೇತಿ ನೀಡಿದೆ. ಮುಂದಿನ ದಿನಗಳಲ್ಲಿ 20 ವರ್ಷದೊಳಗಿನ ಎಲ್ಲ ಯುವತಿಯರಿಗೂ ಮಹಿಳಾ ಸಶಕ್ತತೆಯ ತರಬೇತಿ ನೀಡುವ ಗುರಿ ಇದೆ ಎಂದು ಹೇಳಿದರು.</p>.<p>ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ದೇಶದ ಹಿತಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಲು ಯುವಕರು ಮುಂದೆ ಬರಬೇಕಾಗಿದೆ ಎಂದರು.</p>.<p>ನಮ್ಮ ಧರ್ಮ, ನಂಬಿಕೆಗಳೊಂದಿಗೆ ನಾವು ಇತರರಿಗೆ ತೊಂದರೆ ಉಂಟು ಮಾಡದೇ, ಬದುಕುವುದರ ಜತೆಗೆ ದೇಶ ಪ್ರೇಮವನ್ನು ತೋರಿಸಬೇಕಾಗಿದೆ. ದೇಶದ ಒಳಿತಿಗಾಗಿ ನಾವು ಸಮರ್ಪಣಾ ಭಾವದಿಂದ ಪ್ರಾಣತ್ಯಾಗಕ್ಕೂ ಸಿದ್ಧರಾಗುವ ಆದರ್ಶ ನಮ್ಮ ಮುಂದಿರಬೇಕಾಗಿದೆ ಎಂದು ತಿಳಿಸಿದರು.</p>.<p>ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ವೀರೇಶ್ ಬಾಳೆಕಾಯಿ, ಕಾರ್ಯದರ್ಶಿ ಪ್ರತೀಕ್ ಮಾಳಿ, ಬೆಂಗಳೂರು ನಗರ ಘಟಕದ ಕಾರ್ಯದರ್ಶಿ ಸೂರಜ್ ಪಂಡಿತ್ ವೇದಿಕೆಯಲ್ಲಿದ್ದರು. ಸತೀಶ್ ನಿರೂಪಿಸಿದರು.</p>.<p>‘ಎಬಿವಿಪಿ ಆಂಟಿ ವೈರಸ್’</p>.<p>ದೇಶದಲ್ಲಿ ಭಯೋತ್ಪಾದನೆ, ಮಾವೋವಾದಿಗಳು, ನಕ್ಸಲರು ಮತ್ತು ನಗರ ನಕ್ಸಲ್ಗಳಿಗೆ ಎಬಿವಿಪಿಯು ಆಂಟಿ-ವೈರಸ್ ಮತ್ತು ಚುಚ್ಚುಮದ್ದಾಗಿದೆ ಎಂದು ಸುನೀಲ್ ಅಂಬೇಕರ್ ಹೇಳಿದರು.</p>.<p>ದೇಶದಲ್ಲಿ 950 ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಕೇವಲ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಎತ್ತಿದ ಧ್ವನಿಯು ಇಡೀ ವಿದ್ಯಾರ್ಥಿ ಸಮುದಾಯದ ಧ್ವನಿಯಾಗಲು ಸಾಧ್ಯವಿಲ್ಲ. ಎಬಿವಿಪಿ ವಿದ್ಯಾರ್ಥಿಗಳ ನಿಜವಾದ ಪ್ರತಿನಿಧಿಯಾಗಿದ್ದು, ದೇಶದಾದ್ಯಂತ ತನ್ನ ಅಸ್ತಿತ್ವವನ್ನು ಹೊಂದಿದೆ ಎಂದು ತಿಳಿಸಿದರು.</p>.<p>ದೇಶದ ಕೆಲವು ವಿಶ್ವವಿದ್ಯಾಲಯ ಕ್ಯಾಂಪಸ್ಗಳಿಂದ ಮಾವೋವಾದಿ ಸಹಾನುಭೂತಿ ಸಂದೇಶ ಕಳುಹಿಸಲಾಗುತ್ತಿದೆ. ಇಂತಹ ಚಟುವಟಿಕೆಗಳನ್ನು ಎಬಿವಿಪಿ ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಿದೆ. ಎಬಿವಿಪಿ ಮತ್ತೊಮ್ಮೆ ದೇಶದ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ತೆಗೆದುಕೊಂಡಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>