<p><strong>ಮಂಗಳೂರು:</strong> ನಗರದ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಯುವಕನೊಬ್ಬನಿಗೆ ಸೋಮವಾರ ಬೆಳಿಗ್ಗೆ ಚೂರಿ ಇರಿತವಾಗಿದೆ. ಆತನ ಸ್ನೇಹಿತನೇ ಈ ಕೃತ್ಯ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಬಂಟ್ವಾಳ ತಾಲ್ಲೂಕಿನ ಪುಣಚ ನಿವಾಸಿ ಸಚಿನ್ (31) ಚೂರಿ ಇರಿತಕ್ಕೆ ಒಳಗಾದವರು. ಕೇರಳದ ಕೊಲ್ಲಂ ಜಿಲ್ಲೆಯ ಮೊಹಮ್ಮದ್ ನೌಫಲ್ (21) ಚೂರಿ ಇರಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ನೌಫಲ್ ತನ್ನ ಸ್ನೇಹಿತನಾದ ಅನಾಸ್ ಎಂಬಾತನ ಜೊತೆ ಮಂಗಳೂರಿಗೆ ರೈಲಿನಲ್ಲಿ ಭಾನುವಾರ ಸಂಜೆ ಬಂದಿದ್ದನು. ಸಚಿನ್ ಅವರಿಬ್ಬರನ್ನು ಭೇಟಿಯಾಗಿದ್ದು, ರಾತ್ರಿ ಮೂವರೂ ಒಟ್ಟಿಗೆ ಊಟ ಮಾಡಿ ರೈಲು ನಿಲ್ದಾಣದ ಬಳಿ ಮಲಗಿದ್ದರು.</p>.<p>‘ನನ್ನ ಮೊಬೈಲ್ ಹಾಗೂ ₹ 1 ಸಾವಿರವನ್ನು ಕದ್ದಿದ್ದೀಯ’ ಎಂದು ಆರೋಪಿಸಿ ನೌಫಾಲ್ ಭಾನುವಾರ ಬೆಳಿಗ್ಗೆ ಸಚಿನ್ ಜೊತೆ ಜಗಳವಾಡಿದ್ದ. ಈ ಆರೋಪವನ್ನು ಸಚಿನ್ ಅಲ್ಲಗಳೆದಿದ್ದ. ಇದರಿಂದ ಸಿಟ್ಟಿಗೆದ್ದ ನೌಫಲ್ ಜೇಬಿನಿಂದ ಚೂರಿ ತೆಗೆದು ಸಚಿನ್ ಹೊಟ್ಟೆಗೆ ಇರಿದಿದ್ದ. ಗಾಯಾಳುವನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತ ಪ್ರಣಾಪಾಯದಿಂದ ಪಾರಾಗಿದ್ದಾನೆ. ನಗರದ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಗರದ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಯುವಕನೊಬ್ಬನಿಗೆ ಸೋಮವಾರ ಬೆಳಿಗ್ಗೆ ಚೂರಿ ಇರಿತವಾಗಿದೆ. ಆತನ ಸ್ನೇಹಿತನೇ ಈ ಕೃತ್ಯ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಬಂಟ್ವಾಳ ತಾಲ್ಲೂಕಿನ ಪುಣಚ ನಿವಾಸಿ ಸಚಿನ್ (31) ಚೂರಿ ಇರಿತಕ್ಕೆ ಒಳಗಾದವರು. ಕೇರಳದ ಕೊಲ್ಲಂ ಜಿಲ್ಲೆಯ ಮೊಹಮ್ಮದ್ ನೌಫಲ್ (21) ಚೂರಿ ಇರಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ನೌಫಲ್ ತನ್ನ ಸ್ನೇಹಿತನಾದ ಅನಾಸ್ ಎಂಬಾತನ ಜೊತೆ ಮಂಗಳೂರಿಗೆ ರೈಲಿನಲ್ಲಿ ಭಾನುವಾರ ಸಂಜೆ ಬಂದಿದ್ದನು. ಸಚಿನ್ ಅವರಿಬ್ಬರನ್ನು ಭೇಟಿಯಾಗಿದ್ದು, ರಾತ್ರಿ ಮೂವರೂ ಒಟ್ಟಿಗೆ ಊಟ ಮಾಡಿ ರೈಲು ನಿಲ್ದಾಣದ ಬಳಿ ಮಲಗಿದ್ದರು.</p>.<p>‘ನನ್ನ ಮೊಬೈಲ್ ಹಾಗೂ ₹ 1 ಸಾವಿರವನ್ನು ಕದ್ದಿದ್ದೀಯ’ ಎಂದು ಆರೋಪಿಸಿ ನೌಫಾಲ್ ಭಾನುವಾರ ಬೆಳಿಗ್ಗೆ ಸಚಿನ್ ಜೊತೆ ಜಗಳವಾಡಿದ್ದ. ಈ ಆರೋಪವನ್ನು ಸಚಿನ್ ಅಲ್ಲಗಳೆದಿದ್ದ. ಇದರಿಂದ ಸಿಟ್ಟಿಗೆದ್ದ ನೌಫಲ್ ಜೇಬಿನಿಂದ ಚೂರಿ ತೆಗೆದು ಸಚಿನ್ ಹೊಟ್ಟೆಗೆ ಇರಿದಿದ್ದ. ಗಾಯಾಳುವನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತ ಪ್ರಣಾಪಾಯದಿಂದ ಪಾರಾಗಿದ್ದಾನೆ. ನಗರದ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>