<p><strong>ಬಂಟ್ವಾಳ</strong>: ಇಲ್ಲಿನ ಬಿ.ಸಿ.ರೋಡು ಕೃಷಿ ಇಲಾಖೆ ಕಚೇರಿ ಬಳಿ ನಿರ್ಮಾಣಗೊಂಡಿರುವ ಹೊಸ ಹೆಚ್ಚುವರಿ ಗೋದಾಮು ಉದ್ಘಾಟನೆಗೆ ಮುನ್ನವೇ ಸೋರುತ್ತಿದೆ. ಮೊದಲ ಮಳೆಗೇ ಕಾಮಗಾರಿಯ ಗುಣಮಟ್ಟದ ಬಹಿರಂಗಗೊಂಡಿದೆ.</p>.<p>ಕಳೆದ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ಮಂಜೂರಾದ ಜಿಲ್ಲೆಯ ಎರಡು ರೈತ ಸಂಪರ್ಕ ಕೇಂದ್ರಗಳ ಗೋದಾಮುಗಳ ಪೈಕಿ ಒಂದು ಗೋದಾಮು ಇಲ್ಲಿ ನಿರ್ಮಾಣವಾಗಿತ್ತು. ಕೆಆರ್ಐಡಿಎಲ್ ವತಿಯಿಂದ ನಿರ್ಮಿತಿ ಕೇಂದ್ರದ ಮೂಲಕ ₹ 15 ಲಕ್ಷ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ. ಕಾಂಕ್ರೀಟ್ ಕಟ್ಟಡದಂತೆ ಕಾಣುತ್ತದೆ. ಆದರೆ, ಸಿಮೆಂಟ್, ಇಟ್ಟಿಗೆಯಲ್ಲಿ ಕಟ್ಟಿದ ಗೋಡೆಗೆ ಫೈಬರ್ ಶೀಟ್ ಅಳವಡಿಸಲಾಗಿದೆ. ಎದುರು ಭಾಗದಲ್ಲಿ ಕಾಂಕ್ರೀಟ್ ಕಟ್ಟಡದಂತೆ ಕಾಣುವಂತೆ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಗೋದಾಮು ತಲುಪಲು ದಾರಿ ಕೂಡ ಸರಿಯಾಗಿಲ್ಲ ಎಂಬುದು ಸ್ಥಳೀಯರ ಆರೋಪ.</p>.<p>ಕೃಷಿ ಇಲಾಖೆ ಕಚೇರಿ ಮಾಡಿನ ನೀರು ಕೂಡ ಈ ಗೋದಾಮಿನ ಗೋಡೆಯ ಮೇಲೆ ಸುರಿಯುತ್ತದೆ. ಇಲ್ಲಿ ಬಿತ್ತನೆ ಬೀಜ ಸಹಿತ ರಸಗೊಬ್ಬರ, ಸುಣ್ಣ ಸಂಗ್ರಹಿಸಿದರೆ ಅದು ಗುಣಮಟ್ಟದಿಂದ ಇರಲು ಸಾಧ್ಯವಿಲ್ಲ ಎಂದು ರೈತರೊಬ್ಬರು ಆರೋಪಿಸಿದರು.</p>.<p>ಪಾಣೆಮಂಗಳೂರು ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡವೂ ಇಲ್ಲದೆ ನಿವೇಶನಕ್ಕಾಗಿ ಕಂದಾಯ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ವಾರ್ಷಿಕ ₹ 66 ಸಾವಿರ ಬಾಡಿಗೆ ನೀಡಿ, ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಟ್ಲ ರೈತ ಸಂಪರ್ಕ ಕೇಂದ್ರಕ್ಕೆ ಉಕ್ಕುಡದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.</p>.<p>ಹಡಿಲು ಗದ್ದೆಯಲ್ಲಿ ಭತ್ತದ<br />ಬೆಳೆಯಲು ಕೃಷಿ ಇಲಾಖೆ ಕೇವಲ ಯಂತ್ರೋಪಕರಣ ಮಾತ್ರ ಒದಗಿಸುತ್ತಿದ್ದು, ಎಕರೆಗೆ ತಲಾ ₹ 5,000 ಪ್ರೋತ್ಸಾಹಧನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಟ್ವಾಳ</strong>: ಇಲ್ಲಿನ ಬಿ.ಸಿ.ರೋಡು ಕೃಷಿ ಇಲಾಖೆ ಕಚೇರಿ ಬಳಿ ನಿರ್ಮಾಣಗೊಂಡಿರುವ ಹೊಸ ಹೆಚ್ಚುವರಿ ಗೋದಾಮು ಉದ್ಘಾಟನೆಗೆ ಮುನ್ನವೇ ಸೋರುತ್ತಿದೆ. ಮೊದಲ ಮಳೆಗೇ ಕಾಮಗಾರಿಯ ಗುಣಮಟ್ಟದ ಬಹಿರಂಗಗೊಂಡಿದೆ.</p>.<p>ಕಳೆದ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ಮಂಜೂರಾದ ಜಿಲ್ಲೆಯ ಎರಡು ರೈತ ಸಂಪರ್ಕ ಕೇಂದ್ರಗಳ ಗೋದಾಮುಗಳ ಪೈಕಿ ಒಂದು ಗೋದಾಮು ಇಲ್ಲಿ ನಿರ್ಮಾಣವಾಗಿತ್ತು. ಕೆಆರ್ಐಡಿಎಲ್ ವತಿಯಿಂದ ನಿರ್ಮಿತಿ ಕೇಂದ್ರದ ಮೂಲಕ ₹ 15 ಲಕ್ಷ ವೆಚ್ಚದಲ್ಲಿ ಇದು ನಿರ್ಮಾಣವಾಗಿದೆ. ಕಾಂಕ್ರೀಟ್ ಕಟ್ಟಡದಂತೆ ಕಾಣುತ್ತದೆ. ಆದರೆ, ಸಿಮೆಂಟ್, ಇಟ್ಟಿಗೆಯಲ್ಲಿ ಕಟ್ಟಿದ ಗೋಡೆಗೆ ಫೈಬರ್ ಶೀಟ್ ಅಳವಡಿಸಲಾಗಿದೆ. ಎದುರು ಭಾಗದಲ್ಲಿ ಕಾಂಕ್ರೀಟ್ ಕಟ್ಟಡದಂತೆ ಕಾಣುವಂತೆ ತಂತ್ರಜ್ಞಾನ ಅಳವಡಿಸಲಾಗಿದೆ. ಈ ಗೋದಾಮು ತಲುಪಲು ದಾರಿ ಕೂಡ ಸರಿಯಾಗಿಲ್ಲ ಎಂಬುದು ಸ್ಥಳೀಯರ ಆರೋಪ.</p>.<p>ಕೃಷಿ ಇಲಾಖೆ ಕಚೇರಿ ಮಾಡಿನ ನೀರು ಕೂಡ ಈ ಗೋದಾಮಿನ ಗೋಡೆಯ ಮೇಲೆ ಸುರಿಯುತ್ತದೆ. ಇಲ್ಲಿ ಬಿತ್ತನೆ ಬೀಜ ಸಹಿತ ರಸಗೊಬ್ಬರ, ಸುಣ್ಣ ಸಂಗ್ರಹಿಸಿದರೆ ಅದು ಗುಣಮಟ್ಟದಿಂದ ಇರಲು ಸಾಧ್ಯವಿಲ್ಲ ಎಂದು ರೈತರೊಬ್ಬರು ಆರೋಪಿಸಿದರು.</p>.<p>ಪಾಣೆಮಂಗಳೂರು ರೈತ ಸಂಪರ್ಕ ಕೇಂದ್ರಕ್ಕೆ ಸ್ವಂತ ಕಟ್ಟಡವೂ ಇಲ್ಲದೆ ನಿವೇಶನಕ್ಕಾಗಿ ಕಂದಾಯ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ವಾರ್ಷಿಕ ₹ 66 ಸಾವಿರ ಬಾಡಿಗೆ ನೀಡಿ, ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವಿಟ್ಲ ರೈತ ಸಂಪರ್ಕ ಕೇಂದ್ರಕ್ಕೆ ಉಕ್ಕುಡದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.</p>.<p>ಹಡಿಲು ಗದ್ದೆಯಲ್ಲಿ ಭತ್ತದ<br />ಬೆಳೆಯಲು ಕೃಷಿ ಇಲಾಖೆ ಕೇವಲ ಯಂತ್ರೋಪಕರಣ ಮಾತ್ರ ಒದಗಿಸುತ್ತಿದ್ದು, ಎಕರೆಗೆ ತಲಾ ₹ 5,000 ಪ್ರೋತ್ಸಾಹಧನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>