ಐಕಳ ಕಂಬಳ ಕೋಣಗಳ ಓಟಕ್ಕಷ್ಟೇ ಸೀಮಿತವಲ್ಲ. ಅದು ಈಗ ಊರಿನ ಉತ್ಸವವಾಗಿ ಪರಿವರ್ತನೆಯಾಗಿದೆ. ಐಕಳೋತ್ಸವದಲ್ಲಿ ಕ್ರೀಡೆ ಸಾಂಸ್ಕೃತಿಕ ಸಾಮಾಜಿಕ ಧಾರ್ಮಿಕ ಕಾರ್ಯಗಳಿಗೂ ಆದ್ಯತೆ ಸಿಗುತ್ತದೆ.
ದೇವಿಪ್ರಸಾದ್ ಶೆಟ್ಟಿ ಐಕಳಬಾವ ಕಂಬಳ ಸಮಿತಿ ಅಧ್ಯಕ್ಷ
ಗೆದ್ದವರಿಗೆ ಚಿನ್ನದ ಪದಕ ಕೊಡುವ ಸಂಪ್ರದಾಯ ಐಕಳಬಾವ ಕಂಬಳದಲ್ಲಿ ಹಿಂದಿನಿಂದಲೇ ಇದೆ. ಈ ಕಂಬಳಕ್ಕೆ ಹೊರನಾಡಿನಿಂದಲೂ ಬೆಂಬಲವಿದ್ದು ಮುಂಬೈಯಲ್ಲಿ ಕಂಬಳ ಸಮಿತಿಯನ್ನೇ ಸ್ಥಾಪಿಸಲಾಗಿದೆ.
ಚಿತ್ತರಂಜನ್ ಭಂಡಾರಿ ಐಕಳಬಾವ ಕಂಬಳ ಸಮಿತಿ ಕಾರ್ಯಾಧ್ಯಕ್ಷ
ಐಕಳ ಮನೆತನದವರ ಜೊತೆ ಊರವರು ಸೇರಿಕೊಂಡು ನಡೆಸುತ್ತಿರುವ ಕಂಬಳಕ್ಕೆ 50 ತುಂಬುತ್ತಿರುವ ದಿನ ಕಂಬಳ ಪ್ರೇಮಿಗಳೆಲ್ಲರ ಸಂಭ್ರಮದ ದಿನ .