‘ಈ ಪ್ರಕರಣದಲ್ಲಿ ಗಿರಿಧರ್ ಶೆಟ್ಟಿ ಜಮೀನಿನ ಮಾಲಿಕರಿಂದ ಭೂ ವ್ಯವಹಾರದ ಒಪ್ಪಂದ ಮಾಡಿಕೊಂಡಿದ್ದು, ಅದರ ಟಿಡಿಆರ್ ಪ್ರಮಾಣಪತ್ರವನ್ನು ತನ್ನ ಪರವಾಗಿ ನೀಡಬೇಕೆಂದು ಬೇಡಿಕೆ ಇಟ್ಟಿರುವುದು ನಿಯಮಬಾಹಿರ. ಟಿಡಿಆರ್ ನಿಯಮ ಪ್ರಕಾರ ಮೂಲ ಮಾಲಕನ ಬದಲಿಗೆ ಮಧ್ಯವರ್ತಿ, ಜಮೀನಿನ ಖರೀದಿ ಒಪ್ಪಂದ ಮಾಡಿಕೊಂಡ ಬಿಲ್ಡರ್ ಜೊತೆ ವ್ಯವಹಾರಕ್ಕೆ ಅವಕಾಶವಿಲ್ಲ. ಈ ಪ್ರಕರಣದಲ್ಲಿ ಪಾಲಿಕೆಯ ನಡೆಯೂ ಕಾನೂನುಬಾಹಿರ’ ಎಂದು ವೇದಿಕೆ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.