<p><strong>ಮಂಗಳೂರು: </strong>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರೆಂಟಿಸ್ಶಿಪ್ ಆಕ್ಟ್ – 1961 ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದ್ದು,ಜಿಲ್ಲೆಯ ಎಲ್ಲಾ ಉದ್ದಿಮೆಗಳು ವೆಬ್ಸೈಟ್ https://apprenticeshipindia.org ಮೂಲಕ ದಿನಾಂಕ ಜೂನ್ 30 ರೊಳಗೆ ನೋಂದಾಯಿಸಿ, ನ್ಯಾಷನಲ್ ಅಪ್ರೆಂಟಿಸ್ಶಿಪ್ ಪ್ರಮೋಷನ್ ಸ್ಕೀಮ್ (ಎನ್ಎಪಿಸ್) ಎಂಬ ಯೋಜನೆಯಲ್ಲಿ ದಾಖಲಿಸಿರುವ ಮಾಹಿತಿಯನ್ನು ಒಡಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.</p>.<p>ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದಡಿ ಶಿಶಿಕ್ಷು (ಅಪ್ರೆಂಟಿಸ್ಶಿಪ್) ಕಾಯ್ದೆ 1961 ಅನ್ನು ಅನುಷ್ಠಾನಗೊಳಿಸಲಾಗಿದ್ದು, ಉದ್ದಿಮೆಗಳಲ್ಲಿರುವ ಸೌಕರ್ಯಗಳನ್ನು ಉಪಯೋಗಿಸಿ ಯುವಕ-ಯುವತಿಯರಿಗೆ ಕೌಶಲ ತರಬೇತಿ ನೀಡುವುದು, ನುರಿತ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವುದು ಶಿಶಿಕ್ಷು ಕಾಯ್ದೆಯ ಉದ್ದೇಶ ಎಂದಿದ್ದಾರೆ. </p>.<p>ಎನ್ಎಪಿಸ್ ನಿಯಮದಂತೆ ಉದ್ದಿಮೆದಾರರು ಅಪ್ರೆಂಟಿಸ್ಶಿಪ್ ತರಬೇತಿಯಲ್ಲಿ ತೊಡಗಿಸಿರುವ ಪ್ರತೀ ಅಭ್ಯರ್ಥಿಗೆ ಮಾಸಿಕ ಪಾವತಿಸುವ ಶಿಷ್ಯ ವೇತನದ (ಸ್ಟೈಪೆಂಡ್) ಶೇ 25 ಅಥವಾ ಮಾಸಿಕ ಗರಿಷ್ಠ ₹1500 ಅನ್ನು ಕೇಂದ್ರ ಸರ್ಕಾರ ಉದ್ದಿಮೆದಾರರಿಗೆ ಮರುಪಾವತಿಸಲಿದೆ. ಮೂಲ ತರಬೇತಿಯ ವ್ಯವಸ್ಥೆಯನ್ನು ಉದ್ದಿಮೆದಾರರೇ ನಡೆಸಿದಲ್ಲಿ ಮೂರು ತಿಂಗಳ ಮೂಲ ತರಬೇತಿಯ ವೆಚ್ಚವನ್ನು ಗರಿಷ್ಠ ₹7500 ಉದ್ದಿಮೆದಾರರಿಗೆ ಕೇಂದ್ರ ಸರ್ಕಾರ ಮರುಪಾವತಿಸಲಿದೆ. ತರಬೇತಿ ಪಡೆಯುತ್ತಿರುವ ಶಿಶಿಕ್ಷು (ಅಪ್ರೆಂಟಿಸ್) ಗಳಿಗೆ ಮಾಸಿಕ ಕನಿಷ್ಠ ₹6,000 (ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ), ಪ್ರತಿ ಐಟಿಐ ಉತ್ತೀರ್ಣ ಅಭ್ಯರ್ಥಿಗೆ ತಿಂಗಳಿಗೆ ₹7,000 ಶಿಷ್ಯವೇತನವನ್ನು ಪಾವತಿಸಬೇಕಾಗುತ್ತದೆ. ಅಪ್ರೆಂಟಿಸ್ಶಿಪ್ ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 14 ವರ್ಷ, ಅಪಾಯಕರ ಉದ್ದಿಮೆಯಾಗಿದ್ದರೆ ಕನಿಷ್ಠ ವಯೋಮಿತಿ 18 ವರ್ಷ ಆಗಿರುತ್ತದೆ.<br /><br />ಶೇ 2.5 ರಿಂದ ಶೇ 15 ರಷ್ಟು ಶಿಶಿಕ್ಷು ತರಬೇತುದಾರರನ್ನು ಆಯ್ಕೆ ಮಾಡಬಹುದಾಗಿದ್ದು, , ಕನಿಷ್ಠ 4 ಮಂದಿ ಉದ್ಯೋಗಿಗಳನ್ನು ಹೊಂದಿರುವ ಉದ್ಯಮ ಸಂಸ್ಥೆಯವರು ಎನ್ಎಪಿಸ್ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರು. 30 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ನಿರ್ಮಾಣ ಸಂಸ್ಥೆ ಹಾಸ್ಪಿಟಲ್, ರೆಸ್ಟಾರೆಂಟ್ಗಳು, ಗೋಡಂಬಿ(ಕ್ಯಾಶ್ಯೂ), ಅಟೋಮೊಬೈಲ್ ಇತ್ಯಾದಿ ಎ ಸಣ್ಣ, ಮಧ್ಯಮ ಹಾಗೂ ಬೃಹತ್ ಉದ್ಯಮ ಸಂಸ್ಥೆಗಳು ಶಿಶಿಕ್ಷು ಕಾಯ್ದೆ 1961 ರಡಿ ನೋಂದಾಯಿಸಬೇಕು.</p>.<p>ಜಿಲ್ಲೆಯ ಎಲ್ಲಾ ಉದ್ದಿಮೆಗಳು ವೆಬ್ಸೈಟ್https://apprenticeshipindia.org ಮೂಲಕ ಜೂನ್ 30 ರೊಳಗೆ ನೋಂದಾಯಿಸಿ, ವಿವರವನ್ನು ವಿವರವನ್ನು ಗೂಗಲ್ ಫಾರ್ಮ್ ಲಿಂಕ್ https://forms.gle/ATh5MZ8ZRFDWjydJ9 ಅಥವಾ ಕ್ಯೂ ಆರ್ ಕೋಡ್ ಮೂಲಕ ದಾಖಲಿಸಬಹುದು. ಅಪ್ರೆಂಟಿಸ್ಶಿಪ್ ಪೋರ್ಟಲ್ ಬಗ್ಗೆ ಹೆಚ್ಚಿನ ಮಾಹಿತಿಗಳಿಗೆ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ (8553306561) ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರೆಂಟಿಸ್ಶಿಪ್ ಆಕ್ಟ್ – 1961 ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದ್ದು,ಜಿಲ್ಲೆಯ ಎಲ್ಲಾ ಉದ್ದಿಮೆಗಳು ವೆಬ್ಸೈಟ್ https://apprenticeshipindia.org ಮೂಲಕ ದಿನಾಂಕ ಜೂನ್ 30 ರೊಳಗೆ ನೋಂದಾಯಿಸಿ, ನ್ಯಾಷನಲ್ ಅಪ್ರೆಂಟಿಸ್ಶಿಪ್ ಪ್ರಮೋಷನ್ ಸ್ಕೀಮ್ (ಎನ್ಎಪಿಸ್) ಎಂಬ ಯೋಜನೆಯಲ್ಲಿ ದಾಖಲಿಸಿರುವ ಮಾಹಿತಿಯನ್ನು ಒಡಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.</p>.<p>ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದಡಿ ಶಿಶಿಕ್ಷು (ಅಪ್ರೆಂಟಿಸ್ಶಿಪ್) ಕಾಯ್ದೆ 1961 ಅನ್ನು ಅನುಷ್ಠಾನಗೊಳಿಸಲಾಗಿದ್ದು, ಉದ್ದಿಮೆಗಳಲ್ಲಿರುವ ಸೌಕರ್ಯಗಳನ್ನು ಉಪಯೋಗಿಸಿ ಯುವಕ-ಯುವತಿಯರಿಗೆ ಕೌಶಲ ತರಬೇತಿ ನೀಡುವುದು, ನುರಿತ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸುವುದು ಶಿಶಿಕ್ಷು ಕಾಯ್ದೆಯ ಉದ್ದೇಶ ಎಂದಿದ್ದಾರೆ. </p>.<p>ಎನ್ಎಪಿಸ್ ನಿಯಮದಂತೆ ಉದ್ದಿಮೆದಾರರು ಅಪ್ರೆಂಟಿಸ್ಶಿಪ್ ತರಬೇತಿಯಲ್ಲಿ ತೊಡಗಿಸಿರುವ ಪ್ರತೀ ಅಭ್ಯರ್ಥಿಗೆ ಮಾಸಿಕ ಪಾವತಿಸುವ ಶಿಷ್ಯ ವೇತನದ (ಸ್ಟೈಪೆಂಡ್) ಶೇ 25 ಅಥವಾ ಮಾಸಿಕ ಗರಿಷ್ಠ ₹1500 ಅನ್ನು ಕೇಂದ್ರ ಸರ್ಕಾರ ಉದ್ದಿಮೆದಾರರಿಗೆ ಮರುಪಾವತಿಸಲಿದೆ. ಮೂಲ ತರಬೇತಿಯ ವ್ಯವಸ್ಥೆಯನ್ನು ಉದ್ದಿಮೆದಾರರೇ ನಡೆಸಿದಲ್ಲಿ ಮೂರು ತಿಂಗಳ ಮೂಲ ತರಬೇತಿಯ ವೆಚ್ಚವನ್ನು ಗರಿಷ್ಠ ₹7500 ಉದ್ದಿಮೆದಾರರಿಗೆ ಕೇಂದ್ರ ಸರ್ಕಾರ ಮರುಪಾವತಿಸಲಿದೆ. ತರಬೇತಿ ಪಡೆಯುತ್ತಿರುವ ಶಿಶಿಕ್ಷು (ಅಪ್ರೆಂಟಿಸ್) ಗಳಿಗೆ ಮಾಸಿಕ ಕನಿಷ್ಠ ₹6,000 (ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ), ಪ್ರತಿ ಐಟಿಐ ಉತ್ತೀರ್ಣ ಅಭ್ಯರ್ಥಿಗೆ ತಿಂಗಳಿಗೆ ₹7,000 ಶಿಷ್ಯವೇತನವನ್ನು ಪಾವತಿಸಬೇಕಾಗುತ್ತದೆ. ಅಪ್ರೆಂಟಿಸ್ಶಿಪ್ ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 14 ವರ್ಷ, ಅಪಾಯಕರ ಉದ್ದಿಮೆಯಾಗಿದ್ದರೆ ಕನಿಷ್ಠ ವಯೋಮಿತಿ 18 ವರ್ಷ ಆಗಿರುತ್ತದೆ.<br /><br />ಶೇ 2.5 ರಿಂದ ಶೇ 15 ರಷ್ಟು ಶಿಶಿಕ್ಷು ತರಬೇತುದಾರರನ್ನು ಆಯ್ಕೆ ಮಾಡಬಹುದಾಗಿದ್ದು, , ಕನಿಷ್ಠ 4 ಮಂದಿ ಉದ್ಯೋಗಿಗಳನ್ನು ಹೊಂದಿರುವ ಉದ್ಯಮ ಸಂಸ್ಥೆಯವರು ಎನ್ಎಪಿಸ್ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರು. 30 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ನಿರ್ಮಾಣ ಸಂಸ್ಥೆ ಹಾಸ್ಪಿಟಲ್, ರೆಸ್ಟಾರೆಂಟ್ಗಳು, ಗೋಡಂಬಿ(ಕ್ಯಾಶ್ಯೂ), ಅಟೋಮೊಬೈಲ್ ಇತ್ಯಾದಿ ಎ ಸಣ್ಣ, ಮಧ್ಯಮ ಹಾಗೂ ಬೃಹತ್ ಉದ್ಯಮ ಸಂಸ್ಥೆಗಳು ಶಿಶಿಕ್ಷು ಕಾಯ್ದೆ 1961 ರಡಿ ನೋಂದಾಯಿಸಬೇಕು.</p>.<p>ಜಿಲ್ಲೆಯ ಎಲ್ಲಾ ಉದ್ದಿಮೆಗಳು ವೆಬ್ಸೈಟ್https://apprenticeshipindia.org ಮೂಲಕ ಜೂನ್ 30 ರೊಳಗೆ ನೋಂದಾಯಿಸಿ, ವಿವರವನ್ನು ವಿವರವನ್ನು ಗೂಗಲ್ ಫಾರ್ಮ್ ಲಿಂಕ್ https://forms.gle/ATh5MZ8ZRFDWjydJ9 ಅಥವಾ ಕ್ಯೂ ಆರ್ ಕೋಡ್ ಮೂಲಕ ದಾಖಲಿಸಬಹುದು. ಅಪ್ರೆಂಟಿಸ್ಶಿಪ್ ಪೋರ್ಟಲ್ ಬಗ್ಗೆ ಹೆಚ್ಚಿನ ಮಾಹಿತಿಗಳಿಗೆ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬಹುದಾಗಿದೆ (8553306561) ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>