‘ಮಂಗಳೂರಿನಂತಹ ನಗರದಲ್ಲಿ ಜನರು ಬಿಯರ್ ಅನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ, ತಂಪಾದ ಬಿಯರ್ ಸೇವನೆಯಿಂದ ಶೀತ ಬರುವ ಭೀತಿ ಆರಂಭವಾಗಿದ್ದು, ಇದರಿಂದ ತಲೆನೋವು, ಗಂಟಲು ಕಿರಿಕಿರಿಯೂ ಆರಂಭವಾಗಬಹುದು ಎನ್ನುವ ಆತಂಕವೂ ಇದೆ. ಇವೆಲ್ಲವೂ ಕೋವಿಡ್–19 ನ ಲಕ್ಷಣಗಳಾಗಿದ್ದರಿಂದ ಅನಗತ್ಯ ಕಿರಿಕಿರಿ ಮಾಡಿಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೆ ಜನರು ಬಂದಂತಿದೆ. ಇದರಿಂದಾಗಿ ಬಿಯರ್ ಮಾರಾಟದಲ್ಲಿ ಇಳಿಕೆಯಾಗಿದೆ. ಜತೆಗೆ ಕೋವಿಡ್–19 ನಿಂದಾಗಿ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿರುವುದು ಇದಕ್ಕೆ ಮತ್ತೊಂದು ಕಾರಣ’ ಎಂದು ಅಬಕಾರಿ ಅಧಿಕಾರಿಗಳು ಹೇಳುತ್ತಾರೆ.