ಇಲ್ಲಿ ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಚುನಾವಣಾ ಬಾಂಡ್ ಮೂಲಕ ಕಾನೂನುಬದ್ಧ ಭ್ರಷ್ಟಾಚಾರ ನಡೆಸಿ ಬಿಜೆಪಿ ₹ 12 ಸಾವಿರ ಕೋಟಿಯನ್ನು ಲೂಟಿ ಮಾಡಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಸಿಬಿಐ ಅಧಿಕಾರಿಗಳನ್ನು ಛೂ ಬಿಟ್ಟು, ‘ದುಡ್ಡು ಕೊಡದಿದ್ದರೆ ನಿಮ್ಮನ್ನು ಮುಗಿಸುತ್ತೇವೆ’ ಎಂದು ಹೆದರಿಸಿ ಪ್ರಕರಣ ದಾಖಲಿಸಿದ, ದುಡ್ಡು ಬಂದ ಬಳಿಕ ಪ್ರಕರಣ ಮುಚ್ಚಿಹಾಕಿದ ಪ್ರಕರಣಗಳು ಬಯಲಾಗಿವೆ’ ಎಂದರು. ಈ ಚುನಾವಣೆ ಸರಿಸಮಾನ ವ್ಯವಸ್ಥೆಯಲ್ಲಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.