ಜಂಕ್ಷನ್ನಿಂದ ಕೊಲ್ನಾಡು ಪ್ರದೇಶದಕ್ಕೆ ಸಂಚಾರ ಕೊಂಡಿಯಾಗಿರುವ ಈ ಸೇತುವೆಯ ಎರಡೂ ಕಡೆ ಸಮಸ್ಯೆ ಇದೆ. ಉಡುಪಿಯತ್ತ ತೆರಳುವ ಸೇತುವೆಯ ಭಾಗದ ತಡೆಗೋಡೆ ಆರು ತಿಂಗಳ ಹಿಂದೆ ನಡೆದ ಅಪಘಾತದಿಂದ ಹಾನಿಗೀಡಾಗಿದ್ದು, ಇನ್ನೂ ದುರಸ್ತಿ ಮಾಡಿಲ್ಲ. ಮತ್ತೊಂದು ಪಾರ್ಶ್ವದಲ್ಲೂ ವಾಹನವೊಂದು ಡಿಕ್ಕಿ ಹೊಡೆದು ತಡೆಗೋಡೆ ಕಿತ್ತು ಹೋಗಿದೆ. ಆದರೂ ದುರಸ್ತಿ ಮಾಡಿಲ್ಲ.