ಬೆಳ್ತಂಗಡಿ: ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳೂರಿನ ಪಾವೂರು ನಿವಾಸಿ ಚಂದ್ರಹಾಸ ಅಮೀನ್ ಎಂಬುವರ ವಿರುದ್ಧ ಸಲ್ಲಿಸಿದ್ದ ₹ 4.75 ಲಕ್ಷ ಮೊತ್ತದ ಚೆಕ್ ಬೌನ್ಸ್ ಪ್ರಕರಣ, ಮುಂಡಾಜೆ ನಿವಾಸಿ ಗುಣಪಾಲ ಎಂ.ಎಸ್.ಎಂಬುವರ ವಿರುದ್ಧದ ₹ 81,721 ಮೊತ್ತದ ಚೆಕ್ ಬೌನ್ಸ್ ಪ್ರಕರಣ, ಕಾಜೂರು ನಿವಾಸಿ ಸಮೀರ್ ಎಂಬರ ವಿರುದ್ಧ ಸಲ್ಲಿಸಿದ್ದ ₹ 1 ಲಕ್ಷ ಮೊತ್ತದ ಚೆಕ್ ಬೌನ್ಸ್ ಪ್ರಕರಣ ಹಾಗೂ ಮೂಡುಬಿದಿರೆ ನಿವಾಸಿ ಸುನಿಲ್ ಎಂಬುವರ ವಿರುದ್ಧದ ₹ 45 ಸಾವಿರ ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.