ಮಂಗಳೂರು: ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ದೇರಳಕಟ್ಟೆ ಜಸ್ಟಿಸ್ ಕೆ.ಎಸ್ ಹೆಗ್ಡೆ ಚಾರಿಟಬಲ್ ಆಸ್ಪತ್ರೆಸಹಯೋಗದೊಂದಿಗೆ ಕ್ಲಾಸಿಕ್ ರೂಬಿ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಲಸಿಕಾ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.
ಅಪಾರ್ಟ್ಮೆಂಟ್ ಸಂಘದ ಅಧ್ಯಕ್ಷ ಡಾ. ಕೆ.ಸಿ ನಾಯ್ಕ್ ಉದ್ಘಾಟಿಸಿ ಮಾತನಾಡಿ, ‘ಲಸಿಕೆ ಬಗ್ಗೆ ಯಾರೂ ಭಯ ಪಡುವ ಅವಶ್ಯಕತೆಯಿಲ್ಲ. ನಾವು ಹಾಗೂ ನಮ್ಮ ಸುತ್ತ ಮುತ್ತಲಿನ ಜನರನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಎಂದರು. ಅಪಾಟ್ಮೆಂಟ್ ಅಸೋಸಿಯೇಷನ್ ಕಾರ್ಯದರ್ಶಿ ರಮೇಶ್ ಕೆ., ಸಹಕಾರ್ಯದರ್ಶಿ ದೀಪಕ್ರಾಜ್, ಸದಸ್ಯೆ ದೀಪಿಕಾ ರೈ, ಶಿವಪ್ರಸಾದ್, ರೋಹನ್ ಶೆಟ್ಟಿ, ಸತೀಶ ಸುವರ್ಣ, ವೈದ್ಯರಾದ ಡಾ. ಅನುಷಾ ಶೆಟ್ಟಿ, ಡಾ. ಲಾವಣ್ಯ, ಡಾ. ನಂದಿತಾ, ಡಾ ನೇಹಾ, ಡಾ. ನಂದನಾ, ಡಾ. ಪ್ರೀತಿಕಾ, ತೇಜ ಮತ್ತು ಮೇಘನಾ, ಶಕ್ತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಉಪಸ್ಥಿತರಿದ್ದರು.