ಅರಣ್ಯ ಇಲಾಖಾಧಿಕಾರಿಗಳು ಗಾಯಗೊಂಡ ಜಿಂಕೆಯನ್ನು ಸಮೀಪದ ಪಶು ಚಿಕಿತ್ಸಾಲಯಕ್ಕೆ ಕೊಂಡೊಯ್ಯುವಷ್ಟರಲ್ಲಿ ಜಿಂಕೆ ಸಾವನ್ನಪ್ಪಿತ್ತು. ಉಪ ಅರಣ್ಯಾಧಿಕಾರಿಗಳಾದ ಸಂದೀಪ್, ಕ್ಯಾರೆಲ್ ಮೊಂತೆರೊ, ಅರಣ್ಯ ವೀಕ್ಷಕ ಪ್ರತಾಪ, ವಾಹನ ಚಾಲಕ ಕಿಶೋರ್ ಮತ್ತು ತಂಡದವರು ಜಿಂಕೆಯ ಮೃತ ದೇಹವನ್ನು ಮಣ್ಣಗುಂಡಿಯಲ್ಲಿರುವ ಅರಣ್ಯ ಇಲಾಖೆಯ ಕೇಂದ್ರೀಯ ನಾಟ ಕೇಂದ್ರದಲ್ಲಿ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಕಾರ್ಯಪ್ಪ ಉಪಸ್ಥಿತಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿದರು.