ಗೆಳೆಯನ ಮನೆಯ ಚಾವಣಿಗೆ ಶೀಟು ಹಾಕುವ ಕಾಯಕಕ್ಕಾಗಿ ಕಾರ್ಮಿಕರೊಂದಿಗೆ ಪದ್ಮನಾಭ ಅವರೂ ಮನೆಯ ಮೇಲೇರಿದ್ದರು. ಆಯತಪ್ಪಿ ಕೆಳಕ್ಕೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಪದ್ಮನಾಭ ಬಂದ್ಯೋಡಿನಲ್ಲಿ ಆಟೊರಿಕ್ಷಾ ಚಾಲಕರಾಗಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ.