ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು | ರೈಲ್ವೆ ಅಂಡರ್‌ಪಾಸ್‌: ಸಾಗಲು ಪಡಿಪಾಟಲು

ಲೆವೆಲ್ ಕ್ರಾಸಿಂಗ್‌ಗಳಲ್ಲಿ ಕಾಯುವ ಪರಿಸ್ಥಿತಿ; ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರಕ್ಕೆ ಕಷ್ಟವಿಲ್ಲ
Published : 1 ಜುಲೈ 2024, 7:16 IST
Last Updated : 1 ಜುಲೈ 2024, 7:16 IST
ಫಾಲೋ ಮಾಡಿ
Comments
ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್ ಕಾಮಗಾರಿಯ ಪರಿಸ್ಥಿತಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್ ಕಾಮಗಾರಿಯ ಪರಿಸ್ಥಿತಿ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಬಜಾಲ್‌ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿರುವುದು
ಬಜಾಲ್‌ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ತುಂಬಿರುವುದು
ಜೆಪ್ಪು ಮಾಹಕಾಳಿಪಡ್ಪು ಅಂಡರ್‌ ಪಾಸ್ ಕಾಮಗಾರಿ ಇನ್ನೇನು ಮುಗಿಯುವ ಹಂತದಲ್ಲಿದೆ. ಈಗಾಗಲೇ ಶೇಕಡ 70ರಷ್ಟು ಕೆಲಸ ಪೂರ್ಣಗೊಂಡಿದ್ದು ಉಳಿದ ಶೇಕಡ 30ರಷ್ಟು ಭಾಗದ ಕೆಲಸವನ್ನು ಆದ್ಯತೆ ಮೇರೆಗೆ ಆದಷ್ಟು ಬೇಗ ಮುಗಿಸಲಾಗುವುದು.
ಅರುಣ್ ಕುಮಾರ್ ಚತುರ್ವೇದಿ ದಕ್ಷಿಣ ರೈಲ್ವೆ ಪಾಲಕ್ಕಾಡ್ ವಿಭಾಗದ ವ್ಯವಸ್ಥಾಪಕ
ಮಲತಾಯಿ ಧೋರಣೆ ಇದ್ದದ್ದೇ
ದಕ್ಷಿಣ ರೈಲ್ವೆಯಿಂದ ಮಂಗಳೂರು ಭಾಗದಕ್ಕೆ ಮಲತಾಯಿ ಧೋರಣೆ ಹಿಂದಿನಿಂದಲೇ ನಡೆಯುತ್ತ ಬಂದಿದೆ ಎನ್ನುತ್ತಾರೆ ರೈಲ್ವೆ ಸಲಹಾ ಮಂಡಳಿ ಸದಸ್ಯ ಹನುಮಂತ ಕಾಮತ್‌. ಮಹಾಕಾಳಿಪ‍ಡ್ಪು ಅಂಡರ್‌ಪಾಸ್ ಕಾಮಗಾರಿ ಬಗ್ಗೆ ಸ್ವಲ್ಪ‍ ಕಾಳಜಿ ವಹಿಸಿದ್ದರೆ ಬೇಗ ಮುಗಿಯುತ್ತಿತ್ತು. ಪಡೀಲ್‌ನಲ್ಲಿ ಅಂಡರ್‌ಪಾಸ್ ನಿರ್ಮಿಸುವಾಗಲೂ ಏನೇನೋ ಸಬೂಬು ಹೇಳಿ ವಿಳಂಬ ಮಾಡಲು ಪ್ರಯತ್ನಿಸಿದ್ದರು. ಮಂಗಳೂರು ತುಂಬಾ ಮಳೆ ಬರುವ ಪ್ರದೇಶ. ಆದ್ದರಿಂದ ಕಾಮಗಾರಿ ನಿರೀಕ್ಷೆಯಂತೆ ಮಾಡಲು ಆಗುವುದಿಲ್ಲ ಎಂಬುದು ರೈಲ್ವೆ ಅಧಿಕಾರಿಗಳು ನೀಡುವ ಸಬೂಬು ಎಂದು ಅವರು ಹೇಳಿದರು. ಈ ಭಾಗದಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವುದು ಕಷ್ಟದ ಕಾರ್ಯ ಎಂದು ಹೇಳಿ ಟೆಂಡರ್ ಕರೆಯುವಾಗಲೇ ಹೆಚ್ಚುವರಿ ಅವಧಿಯನ್ನು ನೀಡಲಾಗುತ್ತದೆ. ಇದರ ದುರ್ಲಾಭ ಪಡೆಯಲು ಗುತ್ತಿಗೆದಾರರು ಪ್ರಯತ್ನಿಸುತ್ತಾರೆ. ಮುಂದಿನ ಸಭೆಯಲ್ಲಿ ಮಹಾಕಾಳಿಪಡ್ಪು ಅಂಡರ್ ಪಾಸ್ ಬಗ್ಗೆ ಮತ್ತೊಮ್ಮೆ ಪ್ರಸ್ತಾಪಿಸುವೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT