ಬೃಜೇಶ್ ಚೌಟ (ಬಿಜೆಪಿ), ಆರ್. ಪದ್ಮರಾಜ್ (ಕಾಂಗ್ರೆಸ್), ಕಾಂತಪ್ಪ (ಬಿಎಸ್ಪಿ), ರಂಜಿನಿ ಎಂ. (ಕರ್ನಾಟಕ ರಾಷ್ಟ್ರ ಸಮಿತಿ–ಕೆಆರ್ಎಸ್), ಕೆ.ಇ.ಮನೋಹರ (ಉತ್ತಮ ಪ್ರಜಾಕೀಯ ಪಕ್ಷ), ದುರ್ಗಾಪ್ರಸಾದ್ (ಕರುನಾಡ ಸೇವಕ ಪಕ್ಷ), ಸುಪ್ರೀತ್ ಕುಮಾರ್ ಪೂಜಾರಿ (ಜನತಾದಳ ಸಂಯುಕ್ತ), ಮ್ಯಾಕ್ಸಿಂ ಪಿಂಟೊ, ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ ಹಾಗೂ ಸತೀಶ್ ಬಿ. (ಪಕ್ಷೇತರ) ನಾಮಪತ್ರ ಸಲ್ಲಿಸಿದ್ದಾರೆ. ಆರಂಭದಲ್ಲಿ ಜೆಡಿಯುನಿಂದ ನಾಮಪತ್ರ ಸಲ್ಲಿಸಿದ್ದ ಸುಪ್ರೀತ್ ಕುಮಾರ್ ಪೂಜಾರಿ ಆ ಬಳಿಕ ಜನಹಿತ ಪಕ್ಷದಿಂದಲೂ ನಾಮಪತ್ರ ಸಲ್ಲಿಸಿದ್ದರು.