ಸುಳ್ಯ ತಾಲ್ಲೂಕಿನ ಮಂಡೆಕೋಲು, ಮೂರೂರು, ಕೇರಳ ಗಡಿಪ್ರದೇಶದ ಬೆಳ್ಳಿಪ್ಪಾಡಿ, ಪಂಜಿಕಲ್ಲು ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಕಾಣಿಸಿಕೊಂಡಿದ್ದು, ಈ ಪ್ರದೇಶದಲ್ಲಿ ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡುತ್ತಿದ್ದ ಕಾಡಾನೆಗಳ ಪೈಕಿ ಒಂಟಿ ಕಾಡಾನೆ ಬೇರ್ಪಟ್ಟು ಕನಕಮಜಲು, ಮುಗೇರು, ಆನೆಗುಂಡಿ ರಕ್ಷಿತಾರಣ್ಯದ ಮೂಲಕವಾಗಿ ಪೆರ್ನಾಜೆ ಕಡೆಗೆ ಬಂದಿರಬಹುದೆಂಬ ಶಂಕಿಸಲಾಗಿದೆ.