<p><strong>ಪುತ್ತೂರು</strong>: ತಾಲ್ಲೂಕಿನ ಪೆರ್ನಾಜೆ ಪರಿಸರಕ್ಕೆ ಒಂದು ವಾರದ ಅವಧಿಯಲ್ಲಿ 4 ಬಾರಿ ರಾತ್ರಿ ವೇಳೆ ಕಾಡಾನೆಗಳು ದಾಳಿ ಮಾಡಿ ಕೃಷಿ ಹಾನಿ ಮಾಡಿದ್ದು, ಕೃಷಿಕರು ಕಂಗೆಟ್ಟಿದ್ದಾರೆ.</p>.<p>ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟಕ್ಕೆ ಶನಿವಾರ ರಾತ್ರಿ ದಾಳಿ ಮಾಡಿ ಕಾಡಾನೆಗಳು 10 ತೆಂಗಿನಮರ, 15ಕ್ಕೂ ಅಧಿಕ ಬಾಳೆಗಿಡಗಳು ಹಾಗೂ 2 ದೀವಿ ಹಲಸು ಮರಗಳನ್ನು ನಾಶ ಮಾಡಿವೆ. ಗೋಪಾಲಕೃಷ್ಣ ಕಲ್ಲೂರಾಯ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ, ತೆಂಗು, ಬಾಳೆಗಿಡಗಳನ್ನು ನಾಶ ಮಾಡಿವೆ.</p>.<p>ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ರಾತ್ರಿ ಗಸ್ತು ತಿರುಗಲು ಪೆರ್ನಾಜೆ ವ್ಯಾಪ್ತಿಗೆ ಬಂದಿದ್ದರು. ಈ ವೇಳೆ ಪೆರ್ನಾಜೆ ಸಮೀಪದ ಸರ್ಜಮೂಲೆ ಎಂಬಲ್ಲಿಗೆ ಕಾಡಾನೆಗಳು ಬಂದಿರುವ ಮಾಹಿತಿಯನ್ನು ಸ್ಥಳೀಯರು ನೀಡಿದ್ದರು. ಸರ್ಜಮೂಲೆಗೆ ತೆರಳಿ ಅಲ್ಲಿಂದ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಿ ತೆರಳಿದ್ದರು. ಆ ಬಳಿಕ ಕಾಡಾನೆಗಳು ಪೆರ್ನಾಜೆ ಪರಿಸರಕ್ಕೆ ಬಂದು ಹಾನಿಮಾಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ತಾಲ್ಲೂಕಿನ ಪೆರ್ನಾಜೆ ಪರಿಸರಕ್ಕೆ ಒಂದು ವಾರದ ಅವಧಿಯಲ್ಲಿ 4 ಬಾರಿ ರಾತ್ರಿ ವೇಳೆ ಕಾಡಾನೆಗಳು ದಾಳಿ ಮಾಡಿ ಕೃಷಿ ಹಾನಿ ಮಾಡಿದ್ದು, ಕೃಷಿಕರು ಕಂಗೆಟ್ಟಿದ್ದಾರೆ.</p>.<p>ಪೆರ್ನಾಜೆಯ ರಾಘವೇಂದ್ರ ಭಟ್ ಅವರ ತೋಟಕ್ಕೆ ಶನಿವಾರ ರಾತ್ರಿ ದಾಳಿ ಮಾಡಿ ಕಾಡಾನೆಗಳು 10 ತೆಂಗಿನಮರ, 15ಕ್ಕೂ ಅಧಿಕ ಬಾಳೆಗಿಡಗಳು ಹಾಗೂ 2 ದೀವಿ ಹಲಸು ಮರಗಳನ್ನು ನಾಶ ಮಾಡಿವೆ. ಗೋಪಾಲಕೃಷ್ಣ ಕಲ್ಲೂರಾಯ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಡಿಕೆ, ತೆಂಗು, ಬಾಳೆಗಿಡಗಳನ್ನು ನಾಶ ಮಾಡಿವೆ.</p>.<p>ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ರಾತ್ರಿ ಗಸ್ತು ತಿರುಗಲು ಪೆರ್ನಾಜೆ ವ್ಯಾಪ್ತಿಗೆ ಬಂದಿದ್ದರು. ಈ ವೇಳೆ ಪೆರ್ನಾಜೆ ಸಮೀಪದ ಸರ್ಜಮೂಲೆ ಎಂಬಲ್ಲಿಗೆ ಕಾಡಾನೆಗಳು ಬಂದಿರುವ ಮಾಹಿತಿಯನ್ನು ಸ್ಥಳೀಯರು ನೀಡಿದ್ದರು. ಸರ್ಜಮೂಲೆಗೆ ತೆರಳಿ ಅಲ್ಲಿಂದ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ನಡೆಸಿ ತೆರಳಿದ್ದರು. ಆ ಬಳಿಕ ಕಾಡಾನೆಗಳು ಪೆರ್ನಾಜೆ ಪರಿಸರಕ್ಕೆ ಬಂದು ಹಾನಿಮಾಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>