ಪತ್ನಿ ಅಶ್ವಿನಿ ರೈ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನೇತ್ರಾವತಿ ನದಿಯಲ್ಲಿ ಐದು ದಿನ ಸ್ಥಳೀಯ ಈಜುಗಾರರು, ದೋಣಿ ಮಾಲೀಕರು, ಕರಾವಳಿ ರಕ್ಷಣಾ ಪಡೆ, ಅಗ್ನಿ ಶಾಮಕ ಸಿಬ್ಬಂದಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾವು ಸಂಭವಿಸಿದ್ದರೆ ಹಾರಿದ 24 ಗಂಟೆ ಬಳಿಕ ಮೃತದೇಹ ಸಾಮಾನ್ಯವಾಗಿ ನದಿ ತೀರಕ್ಕೆ ಬರುವ ವಿಶ್ವಾಸದಿಂದ 24 ಗಂಟೆ ಕಾದು ಬಳಿಕ ಶೋಧ ಕಾರ್ಯ ಆರಂಭಿಸಲಾಗಿತ್ತು. ನದಿ ಆಳದಲ್ಲಿಯೂ ತಂತ್ರಜ್ಞಾನ ಬಳಕೆ ಮಾಡಿ ಶೋಧ ನಡೆಸಿದರೂ ಯಾವುದೇ ರೀತಿಯ ಕುರುಹು ಲಭ್ಯವಾಗಿಲ್ಲ. ಪ್ರಕರಣ ನಿಗೂಢವಾಗಿಯೇ ಉಳಿದಿದೆ.