<p><strong>ಮಂಗಳೂರು:</strong> ಗಣೇಶೋತ್ಸವದ ಆಚರಣೆಗೆ ನಗರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕೋವಿಡ್–19 ನಿಂದಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಇಲ್ಲದಿದ್ದರೂ, ಮನೆಗಳಲ್ಲಿಯೇ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜನರು ಅದ್ದೂರಿ ತಯಾರಿ ನಡೆಸಿದ್ದಾರೆ. ಇದೀಗ ದೊಡ್ಡ ಗಣೇಶ ಮೂರ್ತಿಗಳು ಇಲ್ಲದೇ ಇರುವುದರಿಂದ ಚಿಕ್ಕ ಮೂರ್ತಿಗಳಿಗೆ ಇದೀಗ ಹೆಚ್ಚಿನ ಬೇಡಿಕೆ ಬಂದಿದೆ.</p>.<p>ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಗಣಪತಿಯ ಮೂರ್ತಿಯನ್ನು ವಿವಿಧ ಕಲಾವಿದರು, ಬಗೆ-ಬಗೆಯಲ್ಲಿ ರೂಪಿಸುತ್ತಾರೆ. ಆದರೆ ಮಣ್ಣಗುಡ್ಡೆಯ ಕಲಾವಿದರ ಕುಟುಂಬವೊಂದು ಸಾಂಪ್ರದಾಯಿಕವಾಗಿ, ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಕಳೆದ 90 ವರ್ಷಗಳಿಂದ ತಯಾರಿಸುತ್ತಿದೆ. ಗಣೇಶನ ಮೂರ್ತಿ ರಚನೆ ತಂದೆಯಿಂದಲೇ ಈ ಕುಟುಂಬಕ್ಕೆ ಬಳುವಳಿಯಾಗಿ ಬಂದಿದ್ದು, ಇದೀಗ ಈ ಕುಟುಂಬದಲ್ಲಿ ನಾಲ್ಕನೇ ಪೀಳಿಗೆಯೂ ಗಣೇಶನ ಮೂರ್ತಿ ರಚನೆಯಲ್ಲಿ ತೊಡಗಿಕೊಳ್ಳುತ್ತಿದೆ.</p>.<p>ಎರಡು ತಿಂಗಳ ಹಿಂದೆ ಬರುವ ಚಿತ್ರಾ ನಕ್ಷತ್ರದಿಂದ ಮೂರ್ತಿ ತಯಾರಿಕೆ ಪ್ರಾರಂಭವಾಗುತ್ತಿದ್ದು, ವಿದೇಶದಲ್ಲಿ ವೃತ್ತಿ ಮಾಡುವವರಿಂದ ಹಿಡಿದು ಕುಟುಂಬದ ಸಣ್ಣ ಮಕ್ಕಳವರೆಗೆ ಒಟ್ಟು 22 ಮಂದಿ ಮೂರ್ತಿ ತಯಾರಿಕೆ,ಬಣ್ಣ ಹಚ್ಚುವಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.</p>.<p>ಈ ಕುಟುಂಬದ ಹಿರಿಯರಾದ ದಿವಂಗತ ಮೋಹನ್ ರಾವ್ ಅವರು ಮುಂಬೈಯಲ್ಲಿದ್ದಾಗ ಶೇಟ್ ಒಬ್ಬರ ಮನೆಯಲ್ಲಿದ್ದುಕೊಂಡು ಸುಮಾರು 12 ವರ್ಷಗಳ ಕಾಲ ಗಣೇಶನ ಮೂರ್ತಿ ನಿರ್ಮಿಸಿದ್ದರು. ಅವರಿಂದಲೇ ಬಳುವಳಿಯಾಗಿ ಬಂದ ಈ ಕಲೆಯನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುತ್ತಿದೆ. ತಂದೆಯ ಬಳಿಕ ಅವರ ಮಕ್ಕಳು ಸುಧಾಕರ ರಾವ್, ಪ್ರಭಾಕರ ರಾವ್, ರಾಮಚಂದ್ರ ರಾವ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.</p>.<p>ಗಣೇಶನ ಮೂರ್ತಿ ಸಂಪೂರ್ಣ ಆವೆಮಣ್ಣಿನಿಂದಲೇ ಮಾಡಲಾಗುತ್ತಿದ್ದು, ಇದಕ್ಕೆ ಲೆಡ್ ಫ್ರೀ ಬಣ್ಣವನ್ನು ಮಾತ್ರ ಹಚ್ಚಲಾಗುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ಗಣೇಶನಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇವರು ತಯಾರಿಸಿದ ಗಣೇಶನ ಮೂರ್ತಿಗೆ ಇಂತಿಷ್ಟೇ ಹಣವೆಂದು ನಿಗದಿಪಡಿಸದ ಈ ಕುಟುಂಬ, ಜನರು ನೀಡಿದ್ದಷ್ಟು ಹಣ ಮಾತ್ರ ಪಡೆದುಕೊಳ್ಳುತ್ತದೆ.</p>.<p>ನಗರದ ರಥಬೀದಿಯಲ್ಲೂ ವಿವಿಧ ಆಕಾರ ಹಾಗೂ ಗಾತ್ರದ ಗಣೇಶ ವಿಗ್ರಹಗಳನ್ನು ಸಿದ್ಧಪಡಿಸಲಾಗುತ್ತಿದ್ದು ಕಲಾವಿದರು ಗಣೇಶನ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವುದರಲ್ಲಿ ತಲ್ಲೀನರಾಗಿದ್ದಾರೆ.</p>.<p>ಕೊರೊನಾ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತದೆ ಎಂದು ತಿಳಿದ ಹಲವರು ಮುಂಚಿತವಾಗಿ ವಿಗ್ರಹಗಳನ್ನು ಕಾಯ್ದಿರಿಸಿದ್ದು, ಈಗ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವಕಾಶವಿಲ್ಲದ ಕಾರಣ ವಿಗ್ರಹ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.</p>.<p>ಗಣೇಶೋತ್ಸವದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಜಿಲ್ಲಾಡಳಿತವು ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿದೆ. ಧಾರ್ಮಿಕ ಮುಖಂಡರು ಈ ಹಬ್ಬವನ್ನು ಬರುವ ಫೆಬ್ರುವರಿಯಲ್ಲಿ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸುವ ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಗಣೇಶೋತ್ಸವದ ಆಚರಣೆಗೆ ನಗರದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕೋವಿಡ್–19 ನಿಂದಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ಇಲ್ಲದಿದ್ದರೂ, ಮನೆಗಳಲ್ಲಿಯೇ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜನರು ಅದ್ದೂರಿ ತಯಾರಿ ನಡೆಸಿದ್ದಾರೆ. ಇದೀಗ ದೊಡ್ಡ ಗಣೇಶ ಮೂರ್ತಿಗಳು ಇಲ್ಲದೇ ಇರುವುದರಿಂದ ಚಿಕ್ಕ ಮೂರ್ತಿಗಳಿಗೆ ಇದೀಗ ಹೆಚ್ಚಿನ ಬೇಡಿಕೆ ಬಂದಿದೆ.</p>.<p>ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಗಣಪತಿಯ ಮೂರ್ತಿಯನ್ನು ವಿವಿಧ ಕಲಾವಿದರು, ಬಗೆ-ಬಗೆಯಲ್ಲಿ ರೂಪಿಸುತ್ತಾರೆ. ಆದರೆ ಮಣ್ಣಗುಡ್ಡೆಯ ಕಲಾವಿದರ ಕುಟುಂಬವೊಂದು ಸಾಂಪ್ರದಾಯಿಕವಾಗಿ, ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಕಳೆದ 90 ವರ್ಷಗಳಿಂದ ತಯಾರಿಸುತ್ತಿದೆ. ಗಣೇಶನ ಮೂರ್ತಿ ರಚನೆ ತಂದೆಯಿಂದಲೇ ಈ ಕುಟುಂಬಕ್ಕೆ ಬಳುವಳಿಯಾಗಿ ಬಂದಿದ್ದು, ಇದೀಗ ಈ ಕುಟುಂಬದಲ್ಲಿ ನಾಲ್ಕನೇ ಪೀಳಿಗೆಯೂ ಗಣೇಶನ ಮೂರ್ತಿ ರಚನೆಯಲ್ಲಿ ತೊಡಗಿಕೊಳ್ಳುತ್ತಿದೆ.</p>.<p>ಎರಡು ತಿಂಗಳ ಹಿಂದೆ ಬರುವ ಚಿತ್ರಾ ನಕ್ಷತ್ರದಿಂದ ಮೂರ್ತಿ ತಯಾರಿಕೆ ಪ್ರಾರಂಭವಾಗುತ್ತಿದ್ದು, ವಿದೇಶದಲ್ಲಿ ವೃತ್ತಿ ಮಾಡುವವರಿಂದ ಹಿಡಿದು ಕುಟುಂಬದ ಸಣ್ಣ ಮಕ್ಕಳವರೆಗೆ ಒಟ್ಟು 22 ಮಂದಿ ಮೂರ್ತಿ ತಯಾರಿಕೆ,ಬಣ್ಣ ಹಚ್ಚುವಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.</p>.<p>ಈ ಕುಟುಂಬದ ಹಿರಿಯರಾದ ದಿವಂಗತ ಮೋಹನ್ ರಾವ್ ಅವರು ಮುಂಬೈಯಲ್ಲಿದ್ದಾಗ ಶೇಟ್ ಒಬ್ಬರ ಮನೆಯಲ್ಲಿದ್ದುಕೊಂಡು ಸುಮಾರು 12 ವರ್ಷಗಳ ಕಾಲ ಗಣೇಶನ ಮೂರ್ತಿ ನಿರ್ಮಿಸಿದ್ದರು. ಅವರಿಂದಲೇ ಬಳುವಳಿಯಾಗಿ ಬಂದ ಈ ಕಲೆಯನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುತ್ತಿದೆ. ತಂದೆಯ ಬಳಿಕ ಅವರ ಮಕ್ಕಳು ಸುಧಾಕರ ರಾವ್, ಪ್ರಭಾಕರ ರಾವ್, ರಾಮಚಂದ್ರ ರಾವ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.</p>.<p>ಗಣೇಶನ ಮೂರ್ತಿ ಸಂಪೂರ್ಣ ಆವೆಮಣ್ಣಿನಿಂದಲೇ ಮಾಡಲಾಗುತ್ತಿದ್ದು, ಇದಕ್ಕೆ ಲೆಡ್ ಫ್ರೀ ಬಣ್ಣವನ್ನು ಮಾತ್ರ ಹಚ್ಚಲಾಗುತ್ತಿದೆ. ಈ ಮೂಲಕ ಪರಿಸರ ಸ್ನೇಹಿ ಗಣೇಶನಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇವರು ತಯಾರಿಸಿದ ಗಣೇಶನ ಮೂರ್ತಿಗೆ ಇಂತಿಷ್ಟೇ ಹಣವೆಂದು ನಿಗದಿಪಡಿಸದ ಈ ಕುಟುಂಬ, ಜನರು ನೀಡಿದ್ದಷ್ಟು ಹಣ ಮಾತ್ರ ಪಡೆದುಕೊಳ್ಳುತ್ತದೆ.</p>.<p>ನಗರದ ರಥಬೀದಿಯಲ್ಲೂ ವಿವಿಧ ಆಕಾರ ಹಾಗೂ ಗಾತ್ರದ ಗಣೇಶ ವಿಗ್ರಹಗಳನ್ನು ಸಿದ್ಧಪಡಿಸಲಾಗುತ್ತಿದ್ದು ಕಲಾವಿದರು ಗಣೇಶನ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುವುದರಲ್ಲಿ ತಲ್ಲೀನರಾಗಿದ್ದಾರೆ.</p>.<p>ಕೊರೊನಾ ನಿರ್ಬಂಧಗಳನ್ನು ತೆಗೆದು ಹಾಕಲಾಗುತ್ತದೆ ಎಂದು ತಿಳಿದ ಹಲವರು ಮುಂಚಿತವಾಗಿ ವಿಗ್ರಹಗಳನ್ನು ಕಾಯ್ದಿರಿಸಿದ್ದು, ಈಗ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಅವಕಾಶವಿಲ್ಲದ ಕಾರಣ ವಿಗ್ರಹ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.</p>.<p>ಗಣೇಶೋತ್ಸವದಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷ ಕೊರೊನಾ ಕಾರಣದಿಂದಾಗಿ ಜಿಲ್ಲಾಡಳಿತವು ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿದೆ. ಧಾರ್ಮಿಕ ಮುಖಂಡರು ಈ ಹಬ್ಬವನ್ನು ಬರುವ ಫೆಬ್ರುವರಿಯಲ್ಲಿ ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸುವ ಸಲಹೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>