ಇಲ್ಲಿನ ಸೋರ್ಣಾಡು, ರಾಯಿ, ಸಿದ್ಧಕಟ್ಟೆ, ವಾಮದಪದವು, ಕಾಡಬೆಟ್ಟು, ವಗ್ಗದಲ್ಲಿ ಶನಿವಾರ ನಸುಕಿನ 3 ಗಂಟೆಯಿಂದ 5 ಗಂಟೆವರೆಗೆ ಗಾಳಿ ಮಳೆಯಾಗಿದೆ. ಚರಂಡಿ ನಿರ್ವಹಣೆ ಇಲ್ಲದ ರಸ್ತೆಗಳಲ್ಲಿ ಮಣ್ಣು ತುಂಬಿಕೊಂಡು ಕೆಸರುಮಯವಾಗಿ ಪರಿವರ್ತನೆಗೊಂಡಿದೆ. ಹಲವೆಡೆ ಅಡಿಕೆ, ಬಾಳೆ ಗಿಡ ಮತ್ತು ರಬ್ಬರ್ ಮರಗಳು ಮುರಿದು ಬಿದ್ದಿವೆ. ರಾಯಿ ಸಮೀಪದ ಮುದ್ದಾಜೆ ಎಂಬಲ್ಲಿ ಅಡಿಕೆ ಮರ ಮುರಿದು ಬಿದ್ದು ನಷ್ಟ ಉಂಟಾಗಿದೆ ಎಂದು ಕೃಷಿಕರೊಬ್ಬರು ಅಳಲು ತೋಡಿಕೊಂಡರು.