<p><strong>ಪುತ್ತೂರು:</strong> ಇಲ್ಲಿನ ಐ.ಸಿ.ಎ.ಆರ್ - ಗೇರು ಸಂಶೋಧನಾ ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ಹೊಸ ‘ಎಚ್-130’ ಗೇರು ತಳಿಯನ್ನು ಉತ್ಪಾದನೆ ಮಾಡಿ, ರೈತರಿಗೆ ತಲುಪಿಸಲು ತಮಿಳುನಾಡಿನ ಅಣ್ಣೈ ವೆಲ್ಲಾಂಕಣಿ ನರ್ಸರಿಯ ಜತೆ ಬುಧವಾರ ಲೈಸೆನ್ಸಿಂಗ್ ಒಪ್ಪಂದ ಮಾಡಲಾಯಿತು. ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ಜಿ. ನಾಯಕ್ ಮತ್ತು ನರ್ಸರಿ ಮಾಲೀಕ ಡಿ.ಕ್ಸೇವಿಯರ್ ಒಪ್ಪಂದಕ್ಕೆ ಸಹಿ ಹಾಕಿದರು.</p>.<p>ಈ ಸಂದರ್ಭದಲ್ಲಿ ಮಾಹಿತಿ ನೀಡಿದ ನಿರ್ದೇಶಕ ಡಾ.ಎಂ.ಜಿ.ನಾಯಕ್, ‘ಈ ಎಚ್-130 ತಳಿಯು ಸಂರಕ್ಷಣೆ ಮತ್ತು ರೈತರ ಹಕ್ಕು ಕಾಯ್ದೆ 2001ರ ಅಡಿಯಲ್ಲಿ ಹಕ್ಕುಸ್ವಾಮ್ಯವನ್ನು ಪಡೆದಿದ್ದು, ಕಾನೂನಾತ್ಮಕ ರಕ್ಷಣೆ ಪಡೆದಿದೆ. ಪುತ್ತೂರು ಐ.ಸಿ.ಎ.ಆರ್ - ಗೇರು ಸಂಶೋಧನಾ ನಿರ್ದೇಶನಾಲಯದ ಜತೆ ಒಪ್ಪಂದ ಮಾಡಿಕೊಂಡ ನರ್ಸರಿಗಳು ಮಾತ್ರ ಈ ತಳಿಯ ಗಿಡಗಳನ್ನು ಉತ್ಪಾದನೆ ಮಾಡಿ, ಮಾರುವ ಹಕ್ಕನ್ನು ಪಡೆದಿವೆ. ಒಪ್ಪಂದ ಮಾಡಿಕೊಳ್ಳದೇ ಬೇರೆ ಯಾವುದೇ ನರ್ಸರಿಗಳು ಉತ್ಪಾದನೆ ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ’ ಎಂದು ತಿಳಿಸಿದರು.</p>.<p>‘2001ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಸ್ಯ ತಳಿ ಸಂರಕ್ಷಣೆ ಹಾಗೂ ರೈತ ತಳಿ ಹಕ್ಕುಗಳ ಕಾಯ್ದೆಯ ಪ್ರಕಾರ ಯಾವುದೇ ಹೊಸ ಸಸ್ಯ ತಳಿಯನ್ನು ಅಭಿವೃದ್ಧಿಪಡಿಸಿ, ಅದನ್ನು ಸಸ್ಯ ತಳಿ ಸಂರಕ್ಷಣೆ ಹಾಗೂ ರೈತ ತಳಿ ಹಕ್ಕುಗಳ ಪ್ರಾಧಿಕಾರದಲ್ಲಿ ನೋದಣಿ ಮಾಡಿದಲ್ಲಿ, ಅದರ ಹಕ್ಕುಸ್ವಾಮ್ಯ ಆ ತಳಿಯನ್ನು ಅಭಿವೃದ್ಧಿ ಪಡಿಸಿದವರದ್ದೇ ಆಗಿರುತ್ತದೆ. ಅನುಮತಿ ಪಡೆಯದೇ ಇತರರು ಇದನ್ನು ದುರುಪಯೋಗ ಮಾಡುವಂತಿಲ್ಲ. ದುರುಪಯೋಗ ಕಂಡುಬಂದರೆ ಅದು ಕಾನೂನಿನ ಪ್ರಕಾರ ಅಪರಾಧ’ ಎಂದು ಹೇಳಿದರು.</p>.<p>ಈಗಾಗಲೇ ಕೆಲವು ನರ್ಸರಿಯವರು ಈ ತಳಿಯ ಸಸಿಗಳನ್ನು ಉತ್ಪಾದಿಸಿ, ಬೇರೆ ಹೆಸರಿನಲ್ಲಿ ಹಂಚಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಇದು ಮುಂದುವರಿಯಬಾರದು. ಮುಂದುವರಿದಲ್ಲಿ ಸಂಬಂಧಪಟ್ಟವರು ತೊಂದರೆ ಅನುಭವಿಸುತ್ತಾರೆ. ಅದಕ್ಕೆ ಸಂಸ್ಥೆ ಜವಾಬ್ದಾರಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.</p>.<p>ಗೇರು ಕೃಷಿಕರು ಎಚ್-130 ತಳಿಯ ಕಸಿ ಗಿಡಗಳನ್ನು ಸಂಸ್ಥೆಯಿಂದ ಅಧಿಕೃತ ಮಾನ್ಯತೆ ಪಡೆದಿರುವ ನರ್ಸರಿಗಳಲ್ಲಿ ಮಾತ್ರ ಪಡೆಯುವಂತೆ ಹಾಗೂ ಎಚ್-130 ತಳಿಯ ಕಸಿ ಗಿಡಗಳನ್ನು ಉತ್ಪಾದಿಸುವ ಅನುಮತಿಗಾಗಿ ಆಸಕ್ತ ನರ್ಸರಿಗಳು ನಿರ್ದೇಶಕರು, ಐ.ಸಿ.ಎ.ಆರ್-ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು, 574202 (ದೂ.ಸಂ. 08251 230902) ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.</p>.<p>ಸಂಸ್ಥೆಯ ವಿಜ್ಞಾನಿಗಳಾದ ಡಾ. ಮೋಹನ್ ಜಿ.ಎಸ್., ಡಾ. ಶಂಸುದ್ದೀನ್ ಮಂಗಳಶ್ಯೇರಿ, ಡಾ. ಸಿದ್ದಣ್ಣ ಸವದಿ ಇದ್ದರು.</p>.<p>***</p>.<p>ಸಂಸ್ಥೆ ಖಾಸಗಿ ನರ್ಸರಿಗಳ ಉಪಯೋಗಕ್ಕಾಗಿ ತಳಿ ಅಭಿವೃದ್ಧಿ ಮಾಡುತ್ತಿಲ್ಲ. ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ</p>.<p><strong>- ಡಾ.ಎಂ.ಜಿ. ನಾಯಕ್,ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು:</strong> ಇಲ್ಲಿನ ಐ.ಸಿ.ಎ.ಆರ್ - ಗೇರು ಸಂಶೋಧನಾ ನಿರ್ದೇಶನಾಲಯ ಅಭಿವೃದ್ಧಿಪಡಿಸಿರುವ ಹೊಸ ‘ಎಚ್-130’ ಗೇರು ತಳಿಯನ್ನು ಉತ್ಪಾದನೆ ಮಾಡಿ, ರೈತರಿಗೆ ತಲುಪಿಸಲು ತಮಿಳುನಾಡಿನ ಅಣ್ಣೈ ವೆಲ್ಲಾಂಕಣಿ ನರ್ಸರಿಯ ಜತೆ ಬುಧವಾರ ಲೈಸೆನ್ಸಿಂಗ್ ಒಪ್ಪಂದ ಮಾಡಲಾಯಿತು. ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ಜಿ. ನಾಯಕ್ ಮತ್ತು ನರ್ಸರಿ ಮಾಲೀಕ ಡಿ.ಕ್ಸೇವಿಯರ್ ಒಪ್ಪಂದಕ್ಕೆ ಸಹಿ ಹಾಕಿದರು.</p>.<p>ಈ ಸಂದರ್ಭದಲ್ಲಿ ಮಾಹಿತಿ ನೀಡಿದ ನಿರ್ದೇಶಕ ಡಾ.ಎಂ.ಜಿ.ನಾಯಕ್, ‘ಈ ಎಚ್-130 ತಳಿಯು ಸಂರಕ್ಷಣೆ ಮತ್ತು ರೈತರ ಹಕ್ಕು ಕಾಯ್ದೆ 2001ರ ಅಡಿಯಲ್ಲಿ ಹಕ್ಕುಸ್ವಾಮ್ಯವನ್ನು ಪಡೆದಿದ್ದು, ಕಾನೂನಾತ್ಮಕ ರಕ್ಷಣೆ ಪಡೆದಿದೆ. ಪುತ್ತೂರು ಐ.ಸಿ.ಎ.ಆರ್ - ಗೇರು ಸಂಶೋಧನಾ ನಿರ್ದೇಶನಾಲಯದ ಜತೆ ಒಪ್ಪಂದ ಮಾಡಿಕೊಂಡ ನರ್ಸರಿಗಳು ಮಾತ್ರ ಈ ತಳಿಯ ಗಿಡಗಳನ್ನು ಉತ್ಪಾದನೆ ಮಾಡಿ, ಮಾರುವ ಹಕ್ಕನ್ನು ಪಡೆದಿವೆ. ಒಪ್ಪಂದ ಮಾಡಿಕೊಳ್ಳದೇ ಬೇರೆ ಯಾವುದೇ ನರ್ಸರಿಗಳು ಉತ್ಪಾದನೆ ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ’ ಎಂದು ತಿಳಿಸಿದರು.</p>.<p>‘2001ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಸ್ಯ ತಳಿ ಸಂರಕ್ಷಣೆ ಹಾಗೂ ರೈತ ತಳಿ ಹಕ್ಕುಗಳ ಕಾಯ್ದೆಯ ಪ್ರಕಾರ ಯಾವುದೇ ಹೊಸ ಸಸ್ಯ ತಳಿಯನ್ನು ಅಭಿವೃದ್ಧಿಪಡಿಸಿ, ಅದನ್ನು ಸಸ್ಯ ತಳಿ ಸಂರಕ್ಷಣೆ ಹಾಗೂ ರೈತ ತಳಿ ಹಕ್ಕುಗಳ ಪ್ರಾಧಿಕಾರದಲ್ಲಿ ನೋದಣಿ ಮಾಡಿದಲ್ಲಿ, ಅದರ ಹಕ್ಕುಸ್ವಾಮ್ಯ ಆ ತಳಿಯನ್ನು ಅಭಿವೃದ್ಧಿ ಪಡಿಸಿದವರದ್ದೇ ಆಗಿರುತ್ತದೆ. ಅನುಮತಿ ಪಡೆಯದೇ ಇತರರು ಇದನ್ನು ದುರುಪಯೋಗ ಮಾಡುವಂತಿಲ್ಲ. ದುರುಪಯೋಗ ಕಂಡುಬಂದರೆ ಅದು ಕಾನೂನಿನ ಪ್ರಕಾರ ಅಪರಾಧ’ ಎಂದು ಹೇಳಿದರು.</p>.<p>ಈಗಾಗಲೇ ಕೆಲವು ನರ್ಸರಿಯವರು ಈ ತಳಿಯ ಸಸಿಗಳನ್ನು ಉತ್ಪಾದಿಸಿ, ಬೇರೆ ಹೆಸರಿನಲ್ಲಿ ಹಂಚಿರುವುದು ಸಂಸ್ಥೆಯ ಗಮನಕ್ಕೆ ಬಂದಿದೆ. ಇದು ಮುಂದುವರಿಯಬಾರದು. ಮುಂದುವರಿದಲ್ಲಿ ಸಂಬಂಧಪಟ್ಟವರು ತೊಂದರೆ ಅನುಭವಿಸುತ್ತಾರೆ. ಅದಕ್ಕೆ ಸಂಸ್ಥೆ ಜವಾಬ್ದಾರಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.</p>.<p>ಗೇರು ಕೃಷಿಕರು ಎಚ್-130 ತಳಿಯ ಕಸಿ ಗಿಡಗಳನ್ನು ಸಂಸ್ಥೆಯಿಂದ ಅಧಿಕೃತ ಮಾನ್ಯತೆ ಪಡೆದಿರುವ ನರ್ಸರಿಗಳಲ್ಲಿ ಮಾತ್ರ ಪಡೆಯುವಂತೆ ಹಾಗೂ ಎಚ್-130 ತಳಿಯ ಕಸಿ ಗಿಡಗಳನ್ನು ಉತ್ಪಾದಿಸುವ ಅನುಮತಿಗಾಗಿ ಆಸಕ್ತ ನರ್ಸರಿಗಳು ನಿರ್ದೇಶಕರು, ಐ.ಸಿ.ಎ.ಆರ್-ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು, 574202 (ದೂ.ಸಂ. 08251 230902) ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.</p>.<p>ಸಂಸ್ಥೆಯ ವಿಜ್ಞಾನಿಗಳಾದ ಡಾ. ಮೋಹನ್ ಜಿ.ಎಸ್., ಡಾ. ಶಂಸುದ್ದೀನ್ ಮಂಗಳಶ್ಯೇರಿ, ಡಾ. ಸಿದ್ದಣ್ಣ ಸವದಿ ಇದ್ದರು.</p>.<p>***</p>.<p>ಸಂಸ್ಥೆ ಖಾಸಗಿ ನರ್ಸರಿಗಳ ಉಪಯೋಗಕ್ಕಾಗಿ ತಳಿ ಅಭಿವೃದ್ಧಿ ಮಾಡುತ್ತಿಲ್ಲ. ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯ</p>.<p><strong>- ಡಾ.ಎಂ.ಜಿ. ನಾಯಕ್,ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>