<p><strong>ಮಂಗಳೂರು: </strong>ಕೊರೊನಾ ಸೋಂಕಿದ್ದರೂ, ನೀಟ್ ಪರೀಕ್ಷೆ ಬರೆದಿದ್ದ ನಗರದ ಚಿರಾಗ್ ಎಸ್. ರಾವ್ ಅಖಿಲ ಭಾರತ ಮಟ್ಟದಲ್ಲಿ 450ನೇ ರ್ಯಾಂಕ್ ಗಳಿಸಿದ್ದು, ಒಬಿಸಿ ಪಟ್ಟಿಯಲ್ಲಿ 117ನೇ ಸ್ಥಾನ ಪಡೆದಿದ್ದಾರೆ.</p>.<p>ಒಟ್ಟು 720 ಅಂಕಗಳಿಗೆ 685 ಅಂಕ ಗಳಿಸಿರುವ ಅವರು, ನಗರದ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ.</p>.<p>ಕಾರ್ಮಿಕ ಹೋರಾಟಗಾರ ಶಿವಾನಂದ ಕೋಡಿ ಮತ್ತು ಸುಮನಾ ದಂಪತಿ ಪುತ್ರ. ಸಿಇಟಿ ಪರೀಕ್ಷೆಯ ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ವಿಭಾಗಗಳಲ್ಲಿ ಕ್ರಮವಾಗಿ 28 ಮತ್ತು 29ನೇ ಸ್ಥಾನ ಗಳಿಸಿದ್ದರು.</p>.<p>ನೀಟ್ ಪರೀಕ್ಷೆ ಸಂದರ್ಭ ಚಿರಾಗ್ ಕೊರೊನಾ ಸೋಂಕಿನಿಂದ ಬಳಲಿದ್ದರು. ಜಿಲ್ಲಾಡಳಿತವು ಎನ್.ಐ.ಟಿ.ಕೆ ಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗಿ, ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿತ್ತು. ಆಗ ಇವರ ತಂದೆ ಮತ್ತು ತಾಯಿ ಇಬ್ಬರೂ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದರು. ಈ ಎಲ್ಲ ಒತ್ತಡಗಳ ನಡುವೆಯೂ ಚಿರಾಗ್ ಸಾಧನೆ ಮಾಡಿದ್ದಾರೆ.</p>.<p>ಪಾಂಡಿಚೇರಿಯಲ್ಲಿರುವ ದೇಶದ ಪ್ರತಿಷ್ಠಿತ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶಿಕ್ಷಣ ಮುಂದುವರಿಸುವ ಆಶಯವನ್ನು ಚಿರಾಗ್ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಕೊರೊನಾ ಸೋಂಕಿದ್ದರೂ, ನೀಟ್ ಪರೀಕ್ಷೆ ಬರೆದಿದ್ದ ನಗರದ ಚಿರಾಗ್ ಎಸ್. ರಾವ್ ಅಖಿಲ ಭಾರತ ಮಟ್ಟದಲ್ಲಿ 450ನೇ ರ್ಯಾಂಕ್ ಗಳಿಸಿದ್ದು, ಒಬಿಸಿ ಪಟ್ಟಿಯಲ್ಲಿ 117ನೇ ಸ್ಥಾನ ಪಡೆದಿದ್ದಾರೆ.</p>.<p>ಒಟ್ಟು 720 ಅಂಕಗಳಿಗೆ 685 ಅಂಕ ಗಳಿಸಿರುವ ಅವರು, ನಗರದ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ.</p>.<p>ಕಾರ್ಮಿಕ ಹೋರಾಟಗಾರ ಶಿವಾನಂದ ಕೋಡಿ ಮತ್ತು ಸುಮನಾ ದಂಪತಿ ಪುತ್ರ. ಸಿಇಟಿ ಪರೀಕ್ಷೆಯ ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ವಿಭಾಗಗಳಲ್ಲಿ ಕ್ರಮವಾಗಿ 28 ಮತ್ತು 29ನೇ ಸ್ಥಾನ ಗಳಿಸಿದ್ದರು.</p>.<p>ನೀಟ್ ಪರೀಕ್ಷೆ ಸಂದರ್ಭ ಚಿರಾಗ್ ಕೊರೊನಾ ಸೋಂಕಿನಿಂದ ಬಳಲಿದ್ದರು. ಜಿಲ್ಲಾಡಳಿತವು ಎನ್.ಐ.ಟಿ.ಕೆ ಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗಿ, ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿತ್ತು. ಆಗ ಇವರ ತಂದೆ ಮತ್ತು ತಾಯಿ ಇಬ್ಬರೂ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದರು. ಈ ಎಲ್ಲ ಒತ್ತಡಗಳ ನಡುವೆಯೂ ಚಿರಾಗ್ ಸಾಧನೆ ಮಾಡಿದ್ದಾರೆ.</p>.<p>ಪಾಂಡಿಚೇರಿಯಲ್ಲಿರುವ ದೇಶದ ಪ್ರತಿಷ್ಠಿತ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶಿಕ್ಷಣ ಮುಂದುವರಿಸುವ ಆಶಯವನ್ನು ಚಿರಾಗ್ ವ್ಯಕ್ತಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>