<p><strong>ಮೂಡುಬಿದಿರೆ</strong>: ‘ಸ್ವಾತಂತ್ರ್ಯದ ಅಮೃತ ಮಹೋತ್ಸವವು ದೇಶದಲ್ಲಿನ ಸಾಮಾಜಿಕ, ಆರ್ಥಿಕ ಅಂತರಗಳನ್ನು ಅಳಿಸಿ ಹಾಕಲಿ. ಸ್ವಾತಂತ್ರ್ಯದ ಆಶಯವು ಅನುಷ್ಠಾನಗೊಳ್ಳಲಿ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.</p>.<p>ಇಲ್ಲಿನ ಕನ್ನಡ ಭವನದಲ್ಲಿ ಕಾರ್ಕಳದ ಯಕ್ಷ ರಂಗಾಯಣವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ - 1837’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗಳು ಜನ ಮರುಳು, ಜಾತ್ರೆ ಮರುಳೋ ಎಂಬ ಕಾರ್ಯಕ್ರಮಗಳಲ್ಲ. ಅದು ನಮ್ಮ ಸ್ವಾತಂತ್ರ್ಯದ ಅವಲೋಕನ ಹಾಗೂ ಭವಿಷ್ಯದ ದಿಕ್ಸೂಚಿ ಆಗಬೇಕು. ನಾವೆಲ್ಲ ಸ್ವಾತಂತ್ರ್ಯದ ಹೋರಾಟವನ್ನು ಕಣ್ಣಾರೆ ನೋಡಿದವರಲ್ಲ. ನಮಗೆ ಆ ಅನುಭವ ಇಲ್ಲ. ಕತೆಯಂತೆ ಕೇಳಿದ್ದೇವೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ನೆನಪು ಮೆಲುಕು ಹಾಕುವ ಕಾರ್ಯವನ್ನು ಈ ನಾಟಕ ಮಾಡುತ್ತಿದೆ ಎಂದರು.</p>.<p>ಸ್ವಾತಂತ್ರ್ಯದ ಬಳಿಕ ದೇಶಕ್ಕೆ ಹೊಸ ದಿಕ್ಕು, ಸ್ವದೇಶಿ ಚಿಂತನೆ ದೊರೆತಿದೆ. ಆದರೆ, ಸಮಸ್ಯೆಗಳೂ ಇವೆ. ಇನ್ನೂ ಆರ್ಥಿಕ, ಸಾಮಾಜಿಕ ಮತ್ತಿತರ ಅಸಮಾನತೆಗಳಿದ್ದು, ಈ ಅಂತರವನ್ನು ಅಳಿಸಿ ಹಾಕಬೇಕಾಗಿದೆ. ದೇಶದಲ್ಲಿನ 46 ಕೋಟಿ ವಿದ್ಯಾರ್ಥಿಗಳೇ ನಮ್ಮ ಭರವಸೆ ಎಂದರು.</p>.<p>ಯಕ್ಷ ರಂಗಾಯಣದ ನಿರ್ದೇಶಕ ಜೀವನ ರಾಂ ಸುಳ್ಯ ಮಾತನಾಡಿದರು. ಪುರಸಭೆ ಅಧ್ಯಕ್ಷ ಪ್ರಸಾದ್, ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಇದ್ದರು.</p>.<p>ಪ್ರಭಾಕರ ಶಿಶಿಲ ಬರೆದ ನಾಟಕವು ಜೀವನ ರಾಂ ಸುಳ್ಯ ನಿರ್ದೇಶನದಲ್ಲಿ ಮೂಡಿಬಂತು. ಯಕ್ಷ ರಂಗಾಯಣ ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ</strong>: ‘ಸ್ವಾತಂತ್ರ್ಯದ ಅಮೃತ ಮಹೋತ್ಸವವು ದೇಶದಲ್ಲಿನ ಸಾಮಾಜಿಕ, ಆರ್ಥಿಕ ಅಂತರಗಳನ್ನು ಅಳಿಸಿ ಹಾಕಲಿ. ಸ್ವಾತಂತ್ರ್ಯದ ಆಶಯವು ಅನುಷ್ಠಾನಗೊಳ್ಳಲಿ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.</p>.<p>ಇಲ್ಲಿನ ಕನ್ನಡ ಭವನದಲ್ಲಿ ಕಾರ್ಕಳದ ಯಕ್ಷ ರಂಗಾಯಣವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ - 1837’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗಳು ಜನ ಮರುಳು, ಜಾತ್ರೆ ಮರುಳೋ ಎಂಬ ಕಾರ್ಯಕ್ರಮಗಳಲ್ಲ. ಅದು ನಮ್ಮ ಸ್ವಾತಂತ್ರ್ಯದ ಅವಲೋಕನ ಹಾಗೂ ಭವಿಷ್ಯದ ದಿಕ್ಸೂಚಿ ಆಗಬೇಕು. ನಾವೆಲ್ಲ ಸ್ವಾತಂತ್ರ್ಯದ ಹೋರಾಟವನ್ನು ಕಣ್ಣಾರೆ ನೋಡಿದವರಲ್ಲ. ನಮಗೆ ಆ ಅನುಭವ ಇಲ್ಲ. ಕತೆಯಂತೆ ಕೇಳಿದ್ದೇವೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ನೆನಪು ಮೆಲುಕು ಹಾಕುವ ಕಾರ್ಯವನ್ನು ಈ ನಾಟಕ ಮಾಡುತ್ತಿದೆ ಎಂದರು.</p>.<p>ಸ್ವಾತಂತ್ರ್ಯದ ಬಳಿಕ ದೇಶಕ್ಕೆ ಹೊಸ ದಿಕ್ಕು, ಸ್ವದೇಶಿ ಚಿಂತನೆ ದೊರೆತಿದೆ. ಆದರೆ, ಸಮಸ್ಯೆಗಳೂ ಇವೆ. ಇನ್ನೂ ಆರ್ಥಿಕ, ಸಾಮಾಜಿಕ ಮತ್ತಿತರ ಅಸಮಾನತೆಗಳಿದ್ದು, ಈ ಅಂತರವನ್ನು ಅಳಿಸಿ ಹಾಕಬೇಕಾಗಿದೆ. ದೇಶದಲ್ಲಿನ 46 ಕೋಟಿ ವಿದ್ಯಾರ್ಥಿಗಳೇ ನಮ್ಮ ಭರವಸೆ ಎಂದರು.</p>.<p>ಯಕ್ಷ ರಂಗಾಯಣದ ನಿರ್ದೇಶಕ ಜೀವನ ರಾಂ ಸುಳ್ಯ ಮಾತನಾಡಿದರು. ಪುರಸಭೆ ಅಧ್ಯಕ್ಷ ಪ್ರಸಾದ್, ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಇದ್ದರು.</p>.<p>ಪ್ರಭಾಕರ ಶಿಶಿಲ ಬರೆದ ನಾಟಕವು ಜೀವನ ರಾಂ ಸುಳ್ಯ ನಿರ್ದೇಶನದಲ್ಲಿ ಮೂಡಿಬಂತು. ಯಕ್ಷ ರಂಗಾಯಣ ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>