ಸತೀಶ್ ಅವರು ಕೆಳದಿ ರಾಜವಂಶಸ್ಥರು. ಅವರ ಮನೆಯಲ್ಲಿ ‘ಅಶ್ವಾರೂಢ ಪಾರ್ವತಿ ದೇವಿ’ಯ ಆರಾಧನೆ ತಲತಲಾಂತರದಿಂದ ನಡೆಯುತ್ತಿದೆ. ‘ಕೆಳದಿ ರಾಜವಂಶಸ್ಥ ದೇವರಮನೆ’ ಎಂದು ಹೆಸರು ಗಳಿಸಿದೆ. ‘ಕೆಳದಿ ರಾಜ ಕುಟುಂಬಸ್ಥರ ಚರಿತ್ರೆ’ ಎಂಬ ಕೃತಿಯನ್ನೂ ಸತೀಶ್ ರಚಿಸಿದ್ದಾರೆ. ಶೃಂಗೇರಿ ಜಗದ್ಗುರು ಪೀಠದ ಕೋಟೆಕ್ಕಾರು ಉಪಶಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ, ಉಡುಪಿ ಶ್ರೀಕೃಷ್ಣ ಮಠ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಎಡಪದವು ಶ್ರೀ ಹೋಪಾಲಕೃಷ್ಣ ದೇವಾಲಯ, ಕೆಳದಿ ಕವಳೆದುರ್ಗ ಮಠ, ಹೊಸನಗರ ಮಠ, ಗುರುಪುರ ಜಂಗಮ ಮಠ, ಬೆಂಗಳೂರು ಬಸವ ಸಮಿತಿ, ಕೈಗಾ ಅಣುಸ್ಥಾವರ, ಭದ್ರಾವತಿ ಯುವಕ ತಂಡಗಳು ಅವರನ್ನು ಗೌರವಿಸಿವೆ.