ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.
ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದರು. ಶುಕ್ರವಾರ ಸಂಜೆ ದೇವರ ಬಲಿ ಉತ್ಸವ ಆರಂಭಗೊಂಡು, ವಸಂತ ಮಂಟಪದಲ್ಲಿ ದುರ್ಗಾ ಪರಮೇಶ್ವರಿಗೆ ಪೂಜೆ ನಡೆಯಿತು. ಬಳಿಕ ಪಲ್ಲಕಿಯಲ್ಲಿ ಎಕ್ಕಾರಿನವರೆಗೆ ತಡರಾತ್ರಿ ಸವಾರಿ ಸಾಗಿ, ವಾಪಸ್ ಬರುವ ಸಂದರ್ಭದಲ್ಲಿ ಸುಮಾರು 18 ಕಟ್ಟೆಗಳಲ್ಲಿ ಕಟ್ಟೆ ಪೂಜೆ ನಡೆದು, ಮುಂಜಾನೆ ದೇವಿ ಕಟೀಲಿಗೆ ಆಗಮಿಸಿದಳು. ಈ ಸಂದರ್ಭ ಶಿಬರೂರು ಕೊಡಮಣಿತ್ತಾಯ ದೇವರ ಭೇಟಿ ಜರುಗಿತು.
ಕಟೀಲಿನಲ್ಲಿ ದೇವಿ ರಥಾರೂಢಳಾಗಿ ಬ್ರಹ್ಮರಥೋತ್ಸವ ನಡೆಯಿತು. ನಂತರ ದೇವರ ಜಳಕವಾಗಿ, ಎರಡು ಮಾಗಣೆಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಸ್ಥರ ನಡುವೆ ತೂಡೆದಾರ ನಡೆಯಿತು. ತೂಟೆದಾರ ಸೇವೆ ನಡೆಯುವ ‘ಅಗ್ನಿ ಯುದ್ಧ ಸೇವೆ’ ನೋಡಲು ಸಾವಿರಾರು ಜನರು ಸೇರಿದ್ದರು. ತೂಟೆದಾರ ಸೇವೆಯಲ್ಲಿ ಇದುವರೆಗೂ ಗಾಯಗಳಾದ ಘಟನೆಗಳು ನಡೆದಿಲ್ಲ. ಇದು ಇಲ್ಲಿನ ವಿಶೇಷತೆಯಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಬೆಳಗಿನ ಜಾವ 5 ಗಂಟೆಗೆ ತೂಟೆದಾರ ಸೇವೆ ನಡೆಯಿತು. ಸೇವೆಯಲ್ಲಿ ನಿರತ ಅತ್ತೂರು ಹಾಗು ಕೊಡತ್ತೂರು ಗ್ರಾಮದ ಭಕ್ತರು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಬೆಳಗಿನ ಜಾವ 5 ಗಂಟೆಗೆ ತೂಟೆದಾರ ಸೇವೆ ನಡೆಯಿತು. ಸೇವೆಯಲ್ಲಿ ನಿರತ ಅತ್ತೂರು ಹಾಗು ಕೊಡತ್ತೂರು ಗ್ರಾಮದ ಭಕ್ತರು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ತೂಟೆದಾರ ಸೇವೆಯಲ್ಲಿ ನಿರತ ಅತ್ತೂರು ಹಾಗು ಕೊಡತ್ತೂರು ಗ್ರಾಮದ ಭಕ್ತರು – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ