ಹೃದ್ರೋಗ ತಜ್ಞರಾದ ಡಾ. ರಾಜೇಶ್ ಭಟ್ ಯು., ಡಾ. ಪದ್ಮನಾಭ ಕಾಮತ್ ಹಿರಿಯ ಕ್ಯಾಥ್ ಟೆಕ್ನಾಲಜಿಸ್ಟ್ ಡಾ. ಗಣೇಶ್ ಪಡುಕೋಳಿ ಮತ್ತು ನರ್ಸ್ ಶ್ರೀಲತಾ ಅವರನ್ನು ಒಳಗೊಂಡ ತಂಡ ಈ ಚಿಕಿತ್ಸಾ ವಿಧಾನವನ್ನು ಯಶಸ್ವಿಯಾಗಿ ನಡೆಸಿದೆ. ಈ ಬಾಲಕನನ್ನು ಚಿಕಿತ್ಸಾ ವಿಧಾನ ನಡೆದ ಮೂರು ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಶಾಲೆಗೆ ತೆರಳಲು ಆರಂಭಿಸಿದ್ದಾನೆ.