ಒಂದು ಪಕ್ಷಕ್ಕೆ ಬಹುಮತ ನೀಡುವುದು ಒಳಿತು ಎನ್ನುತ್ತಾರೆ. ಆದರೆ, ಹೀಗೆ ಆರಿಸಿ ಬಂದವರಿಂದ ರಕ್ಷಣೆ ಸಿಗುತ್ತದೆಯೇ ಎನ್ನುವುದು ಪ್ರಶ್ನೆ. ಆಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದಾಗ ಈ ಪ್ರಶ್ನೆ ಕಾಡಲು ಪ್ರಾರಂಭವಾಗುತ್ತದೆ. ಎಲ್ಲರೂ ಕಳ್ಳರೇ, ಕಡಿಮೆ ಆತಂಕಕಾರಿ ಕಳ್ಳನನ್ನು ಚುನಾಯಿಸಬೇಕಾದ ಸ್ಥಿತಿ ನಮ್ಮೆದುರಿಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆಯ ಜಯಲಕ್ಷ್ಮಿ, ‘ಬಿಜೆಪಿಯ ರಾಜಕಾರಣ ಕಾಂಗ್ರೆಸ್ಗಿಂತ ಭಿನ್ನವಾಗಿಲ್ಲ. ಆದರೆ, ಕೇವಲ ರಾಜಕೀಯ ಮಾಡುವವರಿಗಿಂತ, ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರು ಹೆಚ್ಚು ಅಪಾಯಕಾರಿ. ಒಡೆದು ಆಳುವ ಬಿಜೆಪಿಯ ಬಗ್ಗೆ ಎಚ್ಚರವಹಿಸಿ’ ಎಂದು ಹೇಳಿದರು.