<p><strong>ಮೂಲ್ಕಿ:</strong> ಸಮಸ್ತ ಸಮಾಜದೊಂದಿಗೆ ಜೀವಿಸುವುದೇ ನಿಜವಾದ ಬದುಕು. ಜಾತಿಯ ಗೋಡೆಯನ್ನು ಕೆಡವಿ ಎಲ್ಲರೂ ಸಮಾನರು ಎನ್ನುವ ನಾರಾಯಣಗುರುಗಳ ಸಂದೇಶವನ್ನು ಎಲ್ಲ ಸಮುದಾಯದವರೂ ಪಾಲಿಸಿದರೆ ಸಾಮರಸ್ಯದ ಬದುಕನ್ನು ಸುಂದರವಾಗಿ ಕಟ್ಟಬಹುದು ಎಂದು ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದರು.</p>.<p>ಅವರು ಮೂಲ್ಕಿ ಬಳಿಯ ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದ ಕಳಿಯದ ಸುವರ್ಣಮಹೋತ್ಸವದ ಅಂಗವಾಗಿ ನಡೆದ ಸಾಧಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಸುವರ್ಣ ಸಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>ಸಂಘದ ಕಾರ್ಯಾಧ್ಯಕ್ಷ ಕೇಶವ ಅಂಚನ್ ಅಧ್ಯಕ್ಷತೆ ವಹಿಸಿದ್ದರು.</p>.<p>ಧಾರ್ಮಿಕ ಚಿಂತಕ ಮಹೇಶ್ ಶಾಂತಿ ಮಾತನಾಡಿದರು.</p>.<p>ಸಾಹಿತಿ ಮುದ್ದು ಮೂಡಬೆಳ್ಳೆ, ಯಕ್ಷಗಾನ ಕಲಾವಿದ ಸೀತಾರಾಂ ಕುಮಾರ್ ಕಟೀಲು, ಕಲಾವಿದರಾದ ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಅರ್ಜುನ್ ಕಾಪಿಕಾಡ್, ಕ್ರೀಡಾಪಟುಗಳಾದ ಸುಕೇಶ್ ಅಮೀನ್ ಕಾರ್ಕಳ, ಜನಾರ್ದನ ಸಿ.ಬಿ. ಅವರನ್ನು ಸನ್ಮಾನಿಸಲಾಯಿತು.</p>.<p>ಮುಂಬೈ ಪೂವಾವೈನ ಸುವರ್ಣ ಬಾಬಾ, ಸಿ.ಎ.ಸುನೀಲ್, ಊರ್ಮಿಳಾ ರಮೇಶ್ಕುಮಾರ್, ತೇಜೋಮಯ, ರಾಹುಲ್ ಸುವರ್ಣ, ಮಾಜಿ ಶಾಸಕ ಜೆ.ಡಿ.ನಾಯ್ಕ್, ಧರ್ಮಾವತಿ ಸುರೇಶ್, ಚಂದಯ್ಯ ಕರ್ಕೇರ, ಪ್ರಕಾಶ್ಕುಮಾರ್, ಬಿ.ಎನ್.ರಮೇಶ್ ಪೂಜಾರಿ ಚೆಳ್ಯಾರು, ನರೇಶ್ಕುಮಾರ್ ಸಸಿಹಿತ್ಲು, ಸರೋಜಿನಿ ಶಾಂತಾರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಲ್ಕಿ:</strong> ಸಮಸ್ತ ಸಮಾಜದೊಂದಿಗೆ ಜೀವಿಸುವುದೇ ನಿಜವಾದ ಬದುಕು. ಜಾತಿಯ ಗೋಡೆಯನ್ನು ಕೆಡವಿ ಎಲ್ಲರೂ ಸಮಾನರು ಎನ್ನುವ ನಾರಾಯಣಗುರುಗಳ ಸಂದೇಶವನ್ನು ಎಲ್ಲ ಸಮುದಾಯದವರೂ ಪಾಲಿಸಿದರೆ ಸಾಮರಸ್ಯದ ಬದುಕನ್ನು ಸುಂದರವಾಗಿ ಕಟ್ಟಬಹುದು ಎಂದು ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದರು.</p>.<p>ಅವರು ಮೂಲ್ಕಿ ಬಳಿಯ ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದ ಕಳಿಯದ ಸುವರ್ಣಮಹೋತ್ಸವದ ಅಂಗವಾಗಿ ನಡೆದ ಸಾಧಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಸುವರ್ಣ ಸಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>ಸಂಘದ ಕಾರ್ಯಾಧ್ಯಕ್ಷ ಕೇಶವ ಅಂಚನ್ ಅಧ್ಯಕ್ಷತೆ ವಹಿಸಿದ್ದರು.</p>.<p>ಧಾರ್ಮಿಕ ಚಿಂತಕ ಮಹೇಶ್ ಶಾಂತಿ ಮಾತನಾಡಿದರು.</p>.<p>ಸಾಹಿತಿ ಮುದ್ದು ಮೂಡಬೆಳ್ಳೆ, ಯಕ್ಷಗಾನ ಕಲಾವಿದ ಸೀತಾರಾಂ ಕುಮಾರ್ ಕಟೀಲು, ಕಲಾವಿದರಾದ ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಅರ್ಜುನ್ ಕಾಪಿಕಾಡ್, ಕ್ರೀಡಾಪಟುಗಳಾದ ಸುಕೇಶ್ ಅಮೀನ್ ಕಾರ್ಕಳ, ಜನಾರ್ದನ ಸಿ.ಬಿ. ಅವರನ್ನು ಸನ್ಮಾನಿಸಲಾಯಿತು.</p>.<p>ಮುಂಬೈ ಪೂವಾವೈನ ಸುವರ್ಣ ಬಾಬಾ, ಸಿ.ಎ.ಸುನೀಲ್, ಊರ್ಮಿಳಾ ರಮೇಶ್ಕುಮಾರ್, ತೇಜೋಮಯ, ರಾಹುಲ್ ಸುವರ್ಣ, ಮಾಜಿ ಶಾಸಕ ಜೆ.ಡಿ.ನಾಯ್ಕ್, ಧರ್ಮಾವತಿ ಸುರೇಶ್, ಚಂದಯ್ಯ ಕರ್ಕೇರ, ಪ್ರಕಾಶ್ಕುಮಾರ್, ಬಿ.ಎನ್.ರಮೇಶ್ ಪೂಜಾರಿ ಚೆಳ್ಯಾರು, ನರೇಶ್ಕುಮಾರ್ ಸಸಿಹಿತ್ಲು, ಸರೋಜಿನಿ ಶಾಂತಾರಾಜ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>