<p><strong>ಬಂಟ್ವಾಳ</strong>: ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ, ಕಲ್ಲಡ್ಕ ಸಮೀಪದ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ ವೇದಾಧ್ಯಯನ ಮಾಡಿ, ತಂದೆಯೊಂದಿಗೆ ಪೌರೋಹಿತ್ಯ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.</p>.<p>ಆ ಮೂಲಕ ವೇದಾಧ್ಯಯನ ಮತ್ತು ಪೌರೋಹಿತ್ಯ ಕೇವಲ ಪುರುಷರಿಗೆ ಮಾತ್ರ ಎಂಬ ಅಘೋಷಿತ ನಿಯಮಕ್ಕೆ ಬದಲಾಗಿ ಈಕೆ ಸ್ವಇಚ್ಛೆಯಿಂದ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p>ಕಶೆಕೋಡಿ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತಿದ್ದು, ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಹಲವು ಮಂದಿ ಬಾಲಕರು ಬರುತ್ತಾರೆ. ಈ ನಡುವೆ ತನ್ನ ಸಹೋದರ ಆದಿತ್ಯ ಕೃಷ್ಣನ ಜೊತೆಗೆ ವೇದಾಧ್ಯಯನ ನಡೆಸಲು ನನಗೂ ಅವಕಾಶ ನೀಡಬೇಕು ಎಂದು ಪುತ್ರಿ ಅನಘಾ ಬೇಡಿಕೆಯಂತೆ ತಂದೆ ಸೂರ್ಯನಾರಾಯಣ ಭಟ್ಟರು ಸಂತೋಷದಿಂದಲೇ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.</p>.<p>‘ನನಗೆ ಪೌರೋಹಿತ್ಯ ನಡೆಸುವ ಬಗ್ಗೆ ಯಾವುದೇ ಇಚ್ಛೆ ಇಲ್ಲ. ಆದರೆ, ತಂದೆಯೊಂದಿಗೆ ಮದುವೆ ಮತ್ತಿತರ ಪೌರೋಹಿತ್ಯ ನಡೆಸುವಷ್ಟು ಸಾಮರ್ಥ್ಯ ಹೊಂದಿದ್ದೇನೆ’ ಎಂದು ಅನಘಾ ಪ್ರತಿಕ್ರಿಯಿಸಿದ್ದಾರೆ.</p>.<p>‘ವೇದಾಧ್ಯಯನ ತರಬೇತಿಯಲ್ಲಿ ಅನಘಾ ಸಂಪೂರ್ಣ ತೊಡಗಿಸಿಕೊಂಡಿರುವುದನ್ನು ಕಂಡ ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಅವರು ನೀಡಿದ್ದ ಪ್ರೋತ್ಸಾಹ ಇತರ ಹೆಣ್ಮಕ್ಕಳಿಗೆ ಪ್ರೇರಣೆಯಾಗುವಂತೆ ಮಾಡಿದೆ’ ಎಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಟ್ವಾಳ</strong>: ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ, ಕಲ್ಲಡ್ಕ ಸಮೀಪದ ಕಶೆಕೋಡಿ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ ವೇದಾಧ್ಯಯನ ಮಾಡಿ, ತಂದೆಯೊಂದಿಗೆ ಪೌರೋಹಿತ್ಯ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.</p>.<p>ಆ ಮೂಲಕ ವೇದಾಧ್ಯಯನ ಮತ್ತು ಪೌರೋಹಿತ್ಯ ಕೇವಲ ಪುರುಷರಿಗೆ ಮಾತ್ರ ಎಂಬ ಅಘೋಷಿತ ನಿಯಮಕ್ಕೆ ಬದಲಾಗಿ ಈಕೆ ಸ್ವಇಚ್ಛೆಯಿಂದ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p>ಕಶೆಕೋಡಿ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತಿದ್ದು, ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಹಲವು ಮಂದಿ ಬಾಲಕರು ಬರುತ್ತಾರೆ. ಈ ನಡುವೆ ತನ್ನ ಸಹೋದರ ಆದಿತ್ಯ ಕೃಷ್ಣನ ಜೊತೆಗೆ ವೇದಾಧ್ಯಯನ ನಡೆಸಲು ನನಗೂ ಅವಕಾಶ ನೀಡಬೇಕು ಎಂದು ಪುತ್ರಿ ಅನಘಾ ಬೇಡಿಕೆಯಂತೆ ತಂದೆ ಸೂರ್ಯನಾರಾಯಣ ಭಟ್ಟರು ಸಂತೋಷದಿಂದಲೇ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.</p>.<p>‘ನನಗೆ ಪೌರೋಹಿತ್ಯ ನಡೆಸುವ ಬಗ್ಗೆ ಯಾವುದೇ ಇಚ್ಛೆ ಇಲ್ಲ. ಆದರೆ, ತಂದೆಯೊಂದಿಗೆ ಮದುವೆ ಮತ್ತಿತರ ಪೌರೋಹಿತ್ಯ ನಡೆಸುವಷ್ಟು ಸಾಮರ್ಥ್ಯ ಹೊಂದಿದ್ದೇನೆ’ ಎಂದು ಅನಘಾ ಪ್ರತಿಕ್ರಿಯಿಸಿದ್ದಾರೆ.</p>.<p>‘ವೇದಾಧ್ಯಯನ ತರಬೇತಿಯಲ್ಲಿ ಅನಘಾ ಸಂಪೂರ್ಣ ತೊಡಗಿಸಿಕೊಂಡಿರುವುದನ್ನು ಕಂಡ ಆರ್ಎಸ್ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಅವರು ನೀಡಿದ್ದ ಪ್ರೋತ್ಸಾಹ ಇತರ ಹೆಣ್ಮಕ್ಕಳಿಗೆ ಪ್ರೇರಣೆಯಾಗುವಂತೆ ಮಾಡಿದೆ’ ಎಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>