ಕಶೆಕೋಡಿ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತಿದ್ದು, ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಹಲವು ಮಂದಿ ಬಾಲಕರು ಬರುತ್ತಾರೆ. ಈ ನಡುವೆ ತನ್ನ ಸಹೋದರ ಆದಿತ್ಯ ಕೃಷ್ಣನ ಜೊತೆಗೆ ವೇದಾಧ್ಯಯನ ನಡೆಸಲು ನನಗೂ ಅವಕಾಶ ನೀಡಬೇಕು ಎಂದು ಪುತ್ರಿ ಅನಘಾ ಬೇಡಿಕೆಯಂತೆ ತಂದೆ ಸೂರ್ಯನಾರಾಯಣ ಭಟ್ಟರು ಸಂತೋಷದಿಂದಲೇ ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ.