‘ನಟನೆಯ ಹೆಸರಿನಲ್ಲಿ ಕೀಳು ಮಟ್ಟದ ಹೇಳಿಕೆ ನೀಡಿದ ಯುವತಿ, ಕಾರ್ಯಕ್ರಮ ಪ್ರಸಾರ ಮಾಡಿ ವಾಹಿನಿಯ ಮುಖ್ಯಸ್ಥರು, ಆಯೋಜಕರು, ತೀರ್ಪುಗಾರರು ಮತ್ತು ನಿರೂಪಕಿ ಮೆಕ್ಯಾನಿಕ್ ಮತ್ತು ಅವರ ಕುಟುಂಬದವರ ಬಳಿ ಬಹಿರಂಗ ಕ್ಷಮೆ ಕೋರಬೇಕು. ಕಾಯಕವನ್ನು ಹೀಯಾಳಿಸುವ ಕಾರ್ಯಕ್ರಮಗಳನ್ನು ಯಾರೂ ಪ್ರಸಾರ ಮಾಡುವುದು ಅಪರಾಧವಾಗಿರುವುದರಿಂದ ಕಾರ್ಮಿಕ ಇಲಾಖೆ ಟಿವಿ ವಾಹಿನಿಗೆ ನೋಟಿಸ್ ನೀಡಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.