ಜೋಕಟ್ಟೆಯಲ್ಲಿ ಪ್ರತಿಭಟನೆ:ಎಂಆರ್ಪಿಎಲ್ ಸೇರಿದಂತೆ ದೊಡ್ಡ ಉದ್ದಿಮೆಗಳಲ್ಲಿ ದುಡಿಯುವ ಸಾವಿರಾರು ಕಾರ್ಮಿಕರು ನೋಂದಣಿಗಾಗಿ ಹೊರಟಿದ್ದರು. ಸರ್ವರ್ ಸ್ಥಗಿತಗೊಂಡ ವಿಷಯ ತಿಳಿದು ಜೋಕಟ್ಟೆಯಲ್ಲೇ ಪ್ರತಿಭಟನೆ ಆರಂಭಿಸಿದರು. ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ ರಾಜ್ಯಗಳ ಈ ಜನರು ರೈಲು ಹಳಿಯ ಮೇಲೆ ಕಲ್ಲು ಇರಿಸಿ ಸಂಚಾರಕ್ಕೆ ಅಡ್ಡಿಪಡಿಸಲು ಮುಂದಾದರು.