ಜನಾಶೀರ್ವಾದ ಯಾತ್ರೆಯ ಅಂಗವಾಗಿ ನಗರಕ್ಕೆ ಭೇಟಿ ನೀಡಿದ್ದ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂವಹನ, ಸಂಪರ್ಕ ವ್ಯವಸ್ಥೆಯ ಉನ್ನತೀಕರಣದ ಪ್ರಯತ್ನಗಳು ನಡೆಯುತ್ತಿವೆ. ಆರ್ಥಿಕ ಭದ್ರತೆಯ ಉದ್ದೇಶದಿಂದ ಬರುವ ದಿನಗಳಲ್ಲಿ ಐಟಿ ಕಂಪನಿಗಳು ಹಳ್ಳಿ ಭಾಗಗಳಲ್ಲಿ ಬಂಡವಾಳ ಹೂಡಿ, ಕೆಲಸ ಆರಂಭಿಸಲಿವೆ. ಬೇರೆ ದೇಶಗಳಿಗೆ ಹೋಲಿಸಿದಲ್ಲಿ ಭಾರತದ ತಾಂತ್ರಿಕತೆ ಅದ್ಭುತವಾಗಿದೆ ಎಂದರು.