<p><strong>ಮಂಗಳೂರು</strong>: ಮರಳು ಮತ್ತು ಕೆಂಪುಕಲು ಕಾನೂನುಬದ್ಧವಾಗಿ ಸಿಗುವಂತಾಗಬೇಕು. ನಿಯಮ ಸರಳೀಕರಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿನಂತಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. </p>.<p>ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪುಕಲ್ಲಿನ ರಾಜಧನವನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಕ್ರಮ ಆಗಬೇಕಾಗಿದೆ. ರಾಜ್ಯ ಸರ್ಕಾರ ಎಲ್ಲವನ್ನೂ ಕಾನೂನುಬದ್ಧಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದು, ಬಿಜೆಪಿಯವರು ಇದೇ ಸಂದರ್ಭವನ್ನು ಬಳಸಿಕೊಂಡು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ ಎಂದರು.</p>.<p>‘ಇ–ಆಟೊರಿಕ್ಷಾಗಳಿಗೆ ಉಚಿತ ಪರವಾನಗಿ ಪಡೆದು ಇತರ ಆಟೊರಿಕ್ಷಾಗಳಂತೆ ಬಾಡಿಗೆಗೆ ಅವಕಾಶ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ವಿಧಾನ ಪರಿಷತ್ನಲ್ಲಿ ಶೂನ್ಯವೇಳೆಯಲ್ಲಿ ಪ್ರಶ್ನೆ ಕೇಳಿದ್ದೆ. ಸಾರಿಗೆ ಸಚಿವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ವಿಳಂಬ ಆದಾಗ ಭರವಸೆ ಸಮಿತಿಯಲ್ಲಿಯೂ ಪ್ರಶ್ನಿಸಿದ ಪರಿಣಾಮ, ಈಗ ಆದೇಶವಾಗಿದೆ. ಇದರಿಂದ ಆಟೊರಿಕ್ಷಾಗಳ ಒತ್ತಡ ಕಡಿಮೆ ಆಗಲಿದೆ ಎಂದು ಹೇಳಿದರು.</p>.<p>ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಐವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹4,09,943 ಮೊತ್ತದ ಪರಿಹಾರದ ಪತ್ರವನ್ನು ವಿತರಿಸಲಾಯಿತು. ಮಿಸ್ಬಾ ಅಬ್ದುಲ್ ಖಾದರ್ ಉಡುಪಿ ಅವರಿಗೆ ₹ 2 ಲಕ್ಷ, ಕುಂಜತ್ತ್ಬೈಲ್ ಕುದ್ರುತ್ತುಲ್ಲ ಅವರಿಗೆ ₹ 94,943, ಅಸೀದಾ ಭಾನು ಬಜಪೆ ಅವರಿಗೆ ₹64 ಸಾವಿರ, ರೊಬಾರ್ಟ್ ನಜರತ್ ಬಿಜೈ ಅವರಿಗೆ ₹35 ಸಾವಿರ, ಸಪ್ನಾಜ್ ಫರಂಗಿಪೇಟ್ ಅವರಿಗೆ ₹16 ಸಾವಿರ ಮೊತ್ತದ ಪರಿಹಾರಧನದ ಪತ್ರವನ್ನು ಐವನ್ ಡಿಸೋಜ ಹಸ್ತಾಂತರಿಸಿದರು.</p>.<p>ಪ್ರಮುಖರಾದ ಸಲೀಂ, ನಾಗೇಂದ ಕುಮಾರ್, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಳ್ಬಾಗ್, ಸುರೇಂದ್ರ ಕಂಬಳಿ, ಪ್ರವೀಣ್ ಜೇಮ್ಸ್, ಮೀನಾ ಟೆಲ್ಲಿಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಮರಳು ಮತ್ತು ಕೆಂಪುಕಲು ಕಾನೂನುಬದ್ಧವಾಗಿ ಸಿಗುವಂತಾಗಬೇಕು. ನಿಯಮ ಸರಳೀಕರಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿನಂತಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. </p>.<p>ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪುಕಲ್ಲಿನ ರಾಜಧನವನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಕ್ರಮ ಆಗಬೇಕಾಗಿದೆ. ರಾಜ್ಯ ಸರ್ಕಾರ ಎಲ್ಲವನ್ನೂ ಕಾನೂನುಬದ್ಧಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದು, ಬಿಜೆಪಿಯವರು ಇದೇ ಸಂದರ್ಭವನ್ನು ಬಳಸಿಕೊಂಡು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ ಎಂದರು.</p>.<p>‘ಇ–ಆಟೊರಿಕ್ಷಾಗಳಿಗೆ ಉಚಿತ ಪರವಾನಗಿ ಪಡೆದು ಇತರ ಆಟೊರಿಕ್ಷಾಗಳಂತೆ ಬಾಡಿಗೆಗೆ ಅವಕಾಶ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ವಿಧಾನ ಪರಿಷತ್ನಲ್ಲಿ ಶೂನ್ಯವೇಳೆಯಲ್ಲಿ ಪ್ರಶ್ನೆ ಕೇಳಿದ್ದೆ. ಸಾರಿಗೆ ಸಚಿವರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ವಿಳಂಬ ಆದಾಗ ಭರವಸೆ ಸಮಿತಿಯಲ್ಲಿಯೂ ಪ್ರಶ್ನಿಸಿದ ಪರಿಣಾಮ, ಈಗ ಆದೇಶವಾಗಿದೆ. ಇದರಿಂದ ಆಟೊರಿಕ್ಷಾಗಳ ಒತ್ತಡ ಕಡಿಮೆ ಆಗಲಿದೆ ಎಂದು ಹೇಳಿದರು.</p>.<p>ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಐವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹4,09,943 ಮೊತ್ತದ ಪರಿಹಾರದ ಪತ್ರವನ್ನು ವಿತರಿಸಲಾಯಿತು. ಮಿಸ್ಬಾ ಅಬ್ದುಲ್ ಖಾದರ್ ಉಡುಪಿ ಅವರಿಗೆ ₹ 2 ಲಕ್ಷ, ಕುಂಜತ್ತ್ಬೈಲ್ ಕುದ್ರುತ್ತುಲ್ಲ ಅವರಿಗೆ ₹ 94,943, ಅಸೀದಾ ಭಾನು ಬಜಪೆ ಅವರಿಗೆ ₹64 ಸಾವಿರ, ರೊಬಾರ್ಟ್ ನಜರತ್ ಬಿಜೈ ಅವರಿಗೆ ₹35 ಸಾವಿರ, ಸಪ್ನಾಜ್ ಫರಂಗಿಪೇಟ್ ಅವರಿಗೆ ₹16 ಸಾವಿರ ಮೊತ್ತದ ಪರಿಹಾರಧನದ ಪತ್ರವನ್ನು ಐವನ್ ಡಿಸೋಜ ಹಸ್ತಾಂತರಿಸಿದರು.</p>.<p>ಪ್ರಮುಖರಾದ ಸಲೀಂ, ನಾಗೇಂದ ಕುಮಾರ್, ಭಾಸ್ಕರ್ ರಾವ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಳ್ಬಾಗ್, ಸುರೇಂದ್ರ ಕಂಬಳಿ, ಪ್ರವೀಣ್ ಜೇಮ್ಸ್, ಮೀನಾ ಟೆಲ್ಲಿಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>