ಕದ್ರಿ ಶ್ರೀಕೃಷ್ಣ ಜನ್ಮಮಹೋತ್ಸವ ಸಮಿತಿ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯ ನಂತರ ಅಮರಾನ್ ಬ್ಯಾಟರೀಸ್ ಹಂಚಿಕೆದಾರ ಸುನಿಲ್ ಕುಮಾರ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಕತ್ತಲನ್ನು ಸೀಳಿದ ಅಲಂಕೃತ ವಿದ್ಯುದ್ದೀಪಗಳು, ಇವುಗಳ ನಡುವೆ ಸಾಗಿದ ಸ್ತಬ್ದಚಿತ್ರಗಳು, ಬೊಂಬೆ ಕುಣಿತ, ಮೈಸೂರು ಬ್ಯಾಂಡ್, ಪಯ್ಯಟ್ಟಂನ ಚೆಂಡೆ ನಿನಾದ, ವಾದ್ಯ ಮೇಳಗಳು, ಹುಲಿವೇಷ ತಂಡಗಳು ಸಂಭ್ರಮವನ್ನು ಇಮ್ಮಡಿಸಿದವು.