ಬಳಿಕ ಎಚ್ಚೆತ್ತ ಕೆಐಡಿಬಿ, ರಸ್ತೆಗೆ ಜಲ್ಲಿಕಲ್ಲು ಕಾಂಕ್ರೀಟ್ ಹಾಕಿ, ರಸ್ತೆ ಕಾಮಗಾರಿ ಆರಂಭಿಸಿತ್ತು. ಇದೀಗ ಮತ್ತೆ ಕಾಮಗಾರಿಗೆ ಬ್ರೇಕ್ ಬಿದ್ದಿದೆ. ಇದರಿಂದಾಗಿ ಅರೆಬರೆ ಕಾಮಗಾರಿ ಕಾರ್ಯದಿಂದ ಇರಾ, ಮಂಚಿ, ಬಿ.ಸಿ.ರೋಡಿಗೆ ಹೋಗುವ ವಾಹನ ಸವಾರರು ತೊಂದರೆ ಎದುರಿಸುವಂತಾಗಿದೆ. ಅಲ್ಲದೆ ಬಹಳಷ್ಟು ಅಪಘಾತ ಪ್ರಕರಣಗಳೂ ಇಲ್ಲಿ ನಡೆದಿವೆ.