‘ನನ್ನ ಗಂಡ ಜ.10 ರಂದು ಬೆಳಿಗ್ಗೆ ಹೆಲ್ಪರ್ ಕೆಲಸಕ್ಕೆ ಹೋಗಿದ್ದು, ಸಂಜೆ 5ಗಂಟೆ ಸುಮಾರಿಗೆ ವಿಪರೀತ ಕುಡಿದುಕೊಂಡು ಮನೆಗೆ ಬಂದಿದ್ದರು. ಮನೆಯಲ್ಲಿ ಮತ್ತೆ ಕುಡಿದಿದ್ದರು. ರಾತ್ರಿ ಊಟವಾದ ಬಳಿಕ ಮನೆಯಲ್ಲೇ ಮಲಗಿದ್ದರು. ಮಲಗಿದ್ದಲ್ಲಿಂದ ಮಧ್ಯ ರಾತ್ರಿ ಎದ್ದು ಮನೆಯಿಂದ ಹೊರಗೆ ಹೋಗಿದ್ದರು. ಮುಂಜಾನೆ 2 ಗಂಟೆ ವೇಳೆ ಎದ್ದು ನೋಡಿದಾಗ ಗಂಡ ಮನೆಯಲ್ಲಿ ಇರಲಿಲ್ಲ. ಹೊರಗಡೆ ಹುಡುಕಿದಾಗ ಗೇಟಿನ ಬಳಿ ವಾಂತಿ ಮಾಡಿಕೊಂಡು ಬಿದ್ದಿದ್ದರು. ಗಂಡನ ಅಣ್ಣ ವಿನಾಯಕ ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದೆ. ಮಾತನಾಡದ ಸ್ಥಿತಿಯಲ್ಲಿದ್ದ ಗಂಡನನ್ನು ಬಾವ ಮತ್ತು ನಾನು ಸೇರಿ ವೆನ್ಲಾಕ್ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ಕರೆದೊಯ್ದಿದ್ದೆವು. ಅಲ್ಲಿ ನನ್ನ ಗಂಡನನ್ನು ಪರೀಕ್ಷೆ ಮಾಡಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ’ ಎಂದು ಹನುಮಂತ ಪೂಜಾರಿ ಅವರ ಪತ್ನಿ ಗೀತಾ ಅವರು ನಗರ ಪೂರ್ವ ಠಾಣೆಗೆ ಜ.11ರಂದು ಬೆಳಿಗ್ಗೆ ದೂರು ನೀಡಿದ್ದರು. ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.