‘ಮಳೆಯಿಂದ ಹಾನಿಗೊಳಾದ ಪ್ರದೇಶಗಳ ಪರಿವೀಕ್ಷಣೆಗೆ ಜಿಲ್ಲಾ ಪ್ರವಾಸ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂಲ್ಕಿ– ಮೂಡುಬಿದಿರೆ ಕ್ಷೇತ್ರದ ಪಕ್ಷಿಕೆರೆ, ಕೊಯ್ಯೊಡೆಯಲ್ಲಿ ಬೆಳೆ ಹಾನಿಗೊಂಡ ಹಾಗೂ ನಂದಿನಿ ನದಿಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಅವರ ಪ್ರವಾಸದ ಪಟ್ಟಿಯಲ್ಲೂ ಈ ಕಾರ್ಯಕ್ರಮ ಇತ್ತು. ಆದರೆ, ಈ ಪ್ರದೇಶಗಳಿಗೆ ಮುಖ್ಯಮಂತ್ರಿಯವರು ಭೇಟಿ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ ಮೂಲ್ಕಿ–ಮೂಡುಬಿದಿರೆ ಕ್ಷೇತ್ರದ ಜನರಿಗೆ ನೋವಾಗಿದೆ’ ಎಂದರು.