<p><strong>ಮಂಗಳೂರು:</strong> ‘ಎಲ್ಲರೂ ಒಂದಾಗಿ ಬದುಕಬೇಕು, ಜನರ ಕಣ್ಣಿರು ಒರೆಸಿ ಸಮಾಜಸೇವೆ ಮಾಡಬೇಕು, ಮಾನವ ಧರ್ಮವೇ ಮುಖ್ಯವಾಗಬೇಕು ಎಂಬುದು ನವಭಾರತ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಖಾಲಿದ್ ಮಹಮ್ಮದ್ ಅವರ ಆಶಯವಾಗಿತ್ತು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.</p>.<p>ನಗರದ ರಥಬೀದಿಯ ನವಭಾರತ ಎಜುಕೇಷನ್ ಸೊಸೈಟಿ, ನವಭಾರತ ರಾತ್ರಿ ಪ್ರೌಢಶಾಲೆಯ 80ನೇ ವರ್ಧಂತ್ಯುತ್ಸವ ಮತ್ತು ನವಭಾರತ ಯಕ್ಷಗಾನ ಅಕಾಡಮಿಯ ಒಂಬತ್ತನೆಯ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಶಿಕ್ಷಣದ ಮಹತ್ವವನ್ನು 80 ವರ್ಷದ ಹಿಂದೆಯೇ ಮನಗಂಡಿದ್ದ ಶಿಕ್ಷಕ ಖಾಲಿದ್ ಮುಹಮ್ಮದ್ ರಾತ್ರಿ ಶಾಲೆಯನ್ನು ಆರಂಭಿಸಿದ್ದು ದೊಡ್ಡ ಸಾಧನೆಯೇ ಸರಿ. ಕರ್ತವ್ಯದ ಜೊತೆ ಸೇವೆ ಮತ್ತು ಸೇವೆಯ ಜೊತೆ ಪ್ರೀತಿ–ವಿಶ್ವಾಸ ಮುಖ್ಯ ಎಂಬುದನ್ನು ಅವರು ಅರಿತಿದ್ದರು’ ಎಂದರು. </p>.<p>ಖಾಲಿದ್ ಮುಹಮ್ಮದ್ ಅವರ ಒಡನಾಡಿ ಮತ್ತು ಸೊಸೈಟಿಯ ಕಾರ್ಯದರ್ಶಿ ಎಂ. ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. </p>.<p>ಖಾಲಿದ್ ಮುಹಮ್ಮದ್ರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ ರಾಮಚಂದ್ರ, ‘ಈ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ, ಹಳೆ ವಿದ್ಯಾರ್ಥಿಯಾಗಿ, ಶಿಕ್ಷಕನಾಗಿ ಕರ್ತವ್ಯ ನಿಭಾಯಿಸಿದ್ದೇನೆ. ಗುರುಗಳಾದ ಖಾಲಿದ್ ಮುಹಮ್ಮದ್ ಮತ್ತು ಅವರ ಕುಟುಂಬದವರ ಪ್ರೀತಿ, ವಿಶ್ವಾಸವೇ ನನ್ನ ಎಲ್ಲಾ ಸತ್ಕಾರ್ಯಗಳಿಗೆ ಪ್ರೇರಣೆ’ ಎಂದರು.</p>.<p>ಸೊಸೈಟಿಯ ಅಧ್ಯಕ್ಷ ಡಾ.ಪಿ.ವಿ.ಶೆಣೈ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಆನಂದ ಕೆ. ಸುವರ್ಣ, ಲಕ್ಷ್ಮಿ ಕೆ. ನಾಯರ್ ಹಾಗೂ ಖಾಲಿದ್ ಮುಹಮ್ಮದ್ ಅವರಮಗ ಫಕ್ರುದ್ದೀನ್ ಅಲಿ ಇದ್ದರು. ಪ್ರೌಢಶಾಲೆಯ ಮುಖ್ಯಶಿಕ್ಷಕ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿದರು.</p>.<p>ವರ್ಧಂತ್ಯುತ್ಸವದ ಅಂಗವಾಗಿ `ಏಕ್ ಶ್ಯಾಮ್ ರಫಿ ಕೆ ನಾಮ್` ಸಂಗೀತ ರಸಮಂಜರಿ ಹಾಗೂ `ಶ್ರೀ ಕೃಷ್ಣ ಕಾರುಣ್ಯ' ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ‘ಎಲ್ಲರೂ ಒಂದಾಗಿ ಬದುಕಬೇಕು, ಜನರ ಕಣ್ಣಿರು ಒರೆಸಿ ಸಮಾಜಸೇವೆ ಮಾಡಬೇಕು, ಮಾನವ ಧರ್ಮವೇ ಮುಖ್ಯವಾಗಬೇಕು ಎಂಬುದು ನವಭಾರತ ಎಜುಕೇಷನ್ ಸೊಸೈಟಿಯ ಸಂಸ್ಥಾಪಕ ಖಾಲಿದ್ ಮಹಮ್ಮದ್ ಅವರ ಆಶಯವಾಗಿತ್ತು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.</p>.<p>ನಗರದ ರಥಬೀದಿಯ ನವಭಾರತ ಎಜುಕೇಷನ್ ಸೊಸೈಟಿ, ನವಭಾರತ ರಾತ್ರಿ ಪ್ರೌಢಶಾಲೆಯ 80ನೇ ವರ್ಧಂತ್ಯುತ್ಸವ ಮತ್ತು ನವಭಾರತ ಯಕ್ಷಗಾನ ಅಕಾಡಮಿಯ ಒಂಬತ್ತನೆಯ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಶಿಕ್ಷಣದ ಮಹತ್ವವನ್ನು 80 ವರ್ಷದ ಹಿಂದೆಯೇ ಮನಗಂಡಿದ್ದ ಶಿಕ್ಷಕ ಖಾಲಿದ್ ಮುಹಮ್ಮದ್ ರಾತ್ರಿ ಶಾಲೆಯನ್ನು ಆರಂಭಿಸಿದ್ದು ದೊಡ್ಡ ಸಾಧನೆಯೇ ಸರಿ. ಕರ್ತವ್ಯದ ಜೊತೆ ಸೇವೆ ಮತ್ತು ಸೇವೆಯ ಜೊತೆ ಪ್ರೀತಿ–ವಿಶ್ವಾಸ ಮುಖ್ಯ ಎಂಬುದನ್ನು ಅವರು ಅರಿತಿದ್ದರು’ ಎಂದರು. </p>.<p>ಖಾಲಿದ್ ಮುಹಮ್ಮದ್ ಅವರ ಒಡನಾಡಿ ಮತ್ತು ಸೊಸೈಟಿಯ ಕಾರ್ಯದರ್ಶಿ ಎಂ. ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. </p>.<p>ಖಾಲಿದ್ ಮುಹಮ್ಮದ್ರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ ರಾಮಚಂದ್ರ, ‘ಈ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ, ಹಳೆ ವಿದ್ಯಾರ್ಥಿಯಾಗಿ, ಶಿಕ್ಷಕನಾಗಿ ಕರ್ತವ್ಯ ನಿಭಾಯಿಸಿದ್ದೇನೆ. ಗುರುಗಳಾದ ಖಾಲಿದ್ ಮುಹಮ್ಮದ್ ಮತ್ತು ಅವರ ಕುಟುಂಬದವರ ಪ್ರೀತಿ, ವಿಶ್ವಾಸವೇ ನನ್ನ ಎಲ್ಲಾ ಸತ್ಕಾರ್ಯಗಳಿಗೆ ಪ್ರೇರಣೆ’ ಎಂದರು.</p>.<p>ಸೊಸೈಟಿಯ ಅಧ್ಯಕ್ಷ ಡಾ.ಪಿ.ವಿ.ಶೆಣೈ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಆನಂದ ಕೆ. ಸುವರ್ಣ, ಲಕ್ಷ್ಮಿ ಕೆ. ನಾಯರ್ ಹಾಗೂ ಖಾಲಿದ್ ಮುಹಮ್ಮದ್ ಅವರಮಗ ಫಕ್ರುದ್ದೀನ್ ಅಲಿ ಇದ್ದರು. ಪ್ರೌಢಶಾಲೆಯ ಮುಖ್ಯಶಿಕ್ಷಕ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿದರು.</p>.<p>ವರ್ಧಂತ್ಯುತ್ಸವದ ಅಂಗವಾಗಿ `ಏಕ್ ಶ್ಯಾಮ್ ರಫಿ ಕೆ ನಾಮ್` ಸಂಗೀತ ರಸಮಂಜರಿ ಹಾಗೂ `ಶ್ರೀ ಕೃಷ್ಣ ಕಾರುಣ್ಯ' ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>