‘ಕೇಂದ್ರ ಸರ್ಕಾರದ ಘೋಷಿತ ಕಾಮಗಾರಿಗಳ ಪೈಕಿ ಶಿರಾಡಿ ಸುರಂಗ ಮಾರ್ಗವು ಎನ್ಎಂಪಿಟಿ ಆದಾಯ ವೃದ್ಧಿಗೆ ಬಹುಮುಖ್ಯವಾಗಿದೆ. ಮಂಗಳೂರು ಸಂಪರ್ಕಿಸುವ ಶಿರಾಡಿ, ಚಾರ್ಮಾಡಿ, ಸಂಪಾಜೆ ಹೆದ್ದಾರಿಗಳನ್ನು ಮಳೆಗಾಲದ ಸಂದರ್ಭದಲ್ಲಿ ಭೂಕುಸಿತ ಮತ್ತಿತರ ಕಾರಣಗಳಿಂದ ಬಳಸಲಾಗುವುದಿಲ್ಲ. ಆದರೆ, ಶಿರಾಡಿ ಸುರಂಗ ಮಾರ್ಗವು ಸರ್ವಋತು ರಸ್ತೆಯಾಗಲಿರುವ ಕಾರಣ, ಸರಕು ಸಾಗಾಟ ನಿರಂತರವಾಗಲಿದೆ’ ಎಂದು ವಿವರಿಸಿದರು.