<p><strong>ಮಂಗಳೂರು:</strong> ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಶಿಬಿರದಲ್ಲಿ 60ಕ್ಕೂ ಅಧಿಕ ಜನರು ನೇತ್ರದಾನ ವಾಗ್ದಾನ ಮಾಡಿದರು.</p>.<p>ರೇಡಿಯೊ ಸಾರಂಗ್, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಪ್ರಸಾದ್ ನೇತ್ರಾಲಯದ ವತಿಯಿಂದ ದಿ. ಗಿರಿಜಾ ಎಕ್ಕೂರ ಸ್ಮರಣಾರ್ಥ ಆಯೋಜಿಸಿದ್ದ ನೇತ್ರದಾನ ಸಂಕಲ್ಪ ಶಿಬಿರದಲ್ಲಿ ಹಲವರು ನೇತ್ರದಾನದ ಕುರಿತು ಆಸಕ್ತಿ ತೋರಿದರು.</p>.<p>ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಶಶಿಧರ್ ಶೆಟ್ಟಿ ಮಾತನಾಡಿ, ಜಗತ್ತನ್ನೇ ನೋಡದವರಿಗೆ ಬೆಳಕು ನೀಡುವ ಅಮೋಘ ಕಾರ್ಯ ಇದಾಗಿದೆ. ನೇತ್ರದಾನ ಮೂಲಕ ಇನ್ನೊಬ್ಬರಿಗೆ ಬಾಳಿಗೆ ಬೆಳಕಾಗುವುದು ಪುಣ್ಯದ ಕಾರ್ಯ ಎಂದರು.</p>.<p>ಜಗತ್ತಿನಲ್ಲಿ ನಾವು ಸಂತೋಷದಿಂದ ಜೀವನ ನಡೆಸಬೇಕು. ಸಾವಿನ ನಂತರವೂ ಹಲವಾರು ಅಂಧರ ಬಾಳನ್ನು ಬೆಳಗುವ ಮೂಲಕ ಅವರ ಬದುಕಿನಲ್ಲೂ ಸಂತೋಷ ತರಬಹುದು. ಅದಕ್ಕಾಗಿ ನೇತ್ರದಾನ ಮಾಡಬೇಕು ಎಂದು ಮನವಿ ಮಾಡಿದರು.</p>.<p>ರೆಡಿಯೊ ಸಾರಂಗ್ ನಿರ್ದೇಶಕ ಡಾ.ಮೆಲ್ವಿನ್ ಪಿಂಟೋ ಮಾತನಾಡಿ, ಭಾರತದಲ್ಲಿ 3 ಕೋಟಿಗೂ ಅಧಿಕ ಜನರು ಅಂಧರಾಗಿದ್ದಾರೆ. ನೇತ್ರದಾನ ಮಾಡಲು ಮುಂದೆ ಬರದಿದ್ದರೆ, ಅಂಧರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ನಿತ್ಯವೂ ದೇಶದಲ್ಲಿ 25 ಸಾವಿರ ಜನರು ಮರಣ ಹೊಂದುತ್ತಿದ್ದು, ಅದರಲ್ಲಿ 1 ಸಾವಿರ ಜನರಾದರೂ ನೇತ್ರದಾನ ಮಾಡಿದಲ್ಲಿ, ಭಾರತವನ್ನು ಅಂಧತ್ವದಿಂದ ಮುಕ್ತ ಮಾಡಬಹುದು ಎಂದು ಅಭಿಪ್ರಾಯಪಟ್ಟರು.</p>.<p>ನೇತ್ರದಾನ ಸಂಕಲ್ಪ ಶಿಬಿರದ ಸಂಘಟಕ ಜಯಪ್ರಕಾಶ್ ಎಕ್ಕೂರ ಮಾತನಾಡಿ, ‘ನನ್ನ ತಾಯಿ ನೇತ್ರದಾನ ಮಾಡುವ ಮೂಲಕ ನಮಗೆ ಸ್ಫೂರ್ತಿಯಾಗಿದ್ದಾರೆ. ಅವರ ಮರಣದ ನಂತರ ನಾವು ನೇತ್ರದಾನ ಮಾಡಿದ್ದು, ಇದರಿಂದ ಹಲವರು ಸ್ಫೂರ್ತಿ ಪಡೆದಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ನಗರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಶಿಬಿರದಲ್ಲಿ 60ಕ್ಕೂ ಅಧಿಕ ಜನರು ನೇತ್ರದಾನ ವಾಗ್ದಾನ ಮಾಡಿದರು.</p>.<p>ರೇಡಿಯೊ ಸಾರಂಗ್, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ, ಪ್ರಸಾದ್ ನೇತ್ರಾಲಯದ ವತಿಯಿಂದ ದಿ. ಗಿರಿಜಾ ಎಕ್ಕೂರ ಸ್ಮರಣಾರ್ಥ ಆಯೋಜಿಸಿದ್ದ ನೇತ್ರದಾನ ಸಂಕಲ್ಪ ಶಿಬಿರದಲ್ಲಿ ಹಲವರು ನೇತ್ರದಾನದ ಕುರಿತು ಆಸಕ್ತಿ ತೋರಿದರು.</p>.<p>ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಶಶಿಧರ್ ಶೆಟ್ಟಿ ಮಾತನಾಡಿ, ಜಗತ್ತನ್ನೇ ನೋಡದವರಿಗೆ ಬೆಳಕು ನೀಡುವ ಅಮೋಘ ಕಾರ್ಯ ಇದಾಗಿದೆ. ನೇತ್ರದಾನ ಮೂಲಕ ಇನ್ನೊಬ್ಬರಿಗೆ ಬಾಳಿಗೆ ಬೆಳಕಾಗುವುದು ಪುಣ್ಯದ ಕಾರ್ಯ ಎಂದರು.</p>.<p>ಜಗತ್ತಿನಲ್ಲಿ ನಾವು ಸಂತೋಷದಿಂದ ಜೀವನ ನಡೆಸಬೇಕು. ಸಾವಿನ ನಂತರವೂ ಹಲವಾರು ಅಂಧರ ಬಾಳನ್ನು ಬೆಳಗುವ ಮೂಲಕ ಅವರ ಬದುಕಿನಲ್ಲೂ ಸಂತೋಷ ತರಬಹುದು. ಅದಕ್ಕಾಗಿ ನೇತ್ರದಾನ ಮಾಡಬೇಕು ಎಂದು ಮನವಿ ಮಾಡಿದರು.</p>.<p>ರೆಡಿಯೊ ಸಾರಂಗ್ ನಿರ್ದೇಶಕ ಡಾ.ಮೆಲ್ವಿನ್ ಪಿಂಟೋ ಮಾತನಾಡಿ, ಭಾರತದಲ್ಲಿ 3 ಕೋಟಿಗೂ ಅಧಿಕ ಜನರು ಅಂಧರಾಗಿದ್ದಾರೆ. ನೇತ್ರದಾನ ಮಾಡಲು ಮುಂದೆ ಬರದಿದ್ದರೆ, ಅಂಧರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ನಿತ್ಯವೂ ದೇಶದಲ್ಲಿ 25 ಸಾವಿರ ಜನರು ಮರಣ ಹೊಂದುತ್ತಿದ್ದು, ಅದರಲ್ಲಿ 1 ಸಾವಿರ ಜನರಾದರೂ ನೇತ್ರದಾನ ಮಾಡಿದಲ್ಲಿ, ಭಾರತವನ್ನು ಅಂಧತ್ವದಿಂದ ಮುಕ್ತ ಮಾಡಬಹುದು ಎಂದು ಅಭಿಪ್ರಾಯಪಟ್ಟರು.</p>.<p>ನೇತ್ರದಾನ ಸಂಕಲ್ಪ ಶಿಬಿರದ ಸಂಘಟಕ ಜಯಪ್ರಕಾಶ್ ಎಕ್ಕೂರ ಮಾತನಾಡಿ, ‘ನನ್ನ ತಾಯಿ ನೇತ್ರದಾನ ಮಾಡುವ ಮೂಲಕ ನಮಗೆ ಸ್ಫೂರ್ತಿಯಾಗಿದ್ದಾರೆ. ಅವರ ಮರಣದ ನಂತರ ನಾವು ನೇತ್ರದಾನ ಮಾಡಿದ್ದು, ಇದರಿಂದ ಹಲವರು ಸ್ಫೂರ್ತಿ ಪಡೆದಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>