ರೆಡಿಯೊ ಸಾರಂಗ್ ನಿರ್ದೇಶಕ ಡಾ.ಮೆಲ್ವಿನ್ ಪಿಂಟೋ ಮಾತನಾಡಿ, ಭಾರತದಲ್ಲಿ 3 ಕೋಟಿಗೂ ಅಧಿಕ ಜನರು ಅಂಧರಾಗಿದ್ದಾರೆ. ನೇತ್ರದಾನ ಮಾಡಲು ಮುಂದೆ ಬರದಿದ್ದರೆ, ಅಂಧರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ನಿತ್ಯವೂ ದೇಶದಲ್ಲಿ 25 ಸಾವಿರ ಜನರು ಮರಣ ಹೊಂದುತ್ತಿದ್ದು, ಅದರಲ್ಲಿ 1 ಸಾವಿರ ಜನರಾದರೂ ನೇತ್ರದಾನ ಮಾಡಿದಲ್ಲಿ, ಭಾರತವನ್ನು ಅಂಧತ್ವದಿಂದ ಮುಕ್ತ ಮಾಡಬಹುದು ಎಂದು ಅಭಿಪ್ರಾಯಪಟ್ಟರು.